April 27, 2024

Bhavana Tv

Its Your Channel

15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕಾ ಕಾರ್ಯಕ್ರಮ

ಇಳಕಲ್ :-ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸ್ಪಂದನ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ
ಮಾನ್ಯ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪದವಿ ಪೂರ್ವ ಶಿಕ್ಷಣ ಇಲಾಖೆ ಬಾಗಲಕೋಟೆ ಹಾಗೂ ಸ್ಪಂದನ ಪದವಿ ಪೂರ್ವ ವಿಜ್ಞಾನ ಕಾಲೇಜು ಇಳಕಲ್ ಜಿಲ್ಲಾ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು 15 ರಿಂದ 18 ವಷ9ದೊಳಗಿನ ವಿದ್ಯಾರ್ಥಿಗಳಿಗೆ ಲಸಿಕಾ ಕಾರ್ಯಕ್ರಮವನ್ನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಹಿರಿಯ ದಿವಾನಿ ನ್ಯಾಯಾಧೀಶರಾದ ಸೈಯ್ಯದ್ ಅಫಾ9ತ್ ಇಬ್ರಾಹಿಂ ಎಂ, ಮುಖ್ಯ ಅತಿಥಿಗಳಾಗಿ ಮಾಧವ ದೇಶಪಾಂಡೆ ಅಧ್ಯಕ್ಷರು ವಕೀಲರ ಸಂಘ ಹುನಗುಂದ, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಅಮರೇಶ್ವರ ಬಿ ಕೌದಿಯವರು ವಹಿಸಿಕೊಂಡಿದ್ದರು ಹಾಗೂ ವೇದಿಕೆಯ ಮೇಲೆ ಸೀನಿಯರ್ ಎಚ್ ಆಯ್ ಓ ಆರೋಗ್ಯ ಇಲಾಖೆ ಇಳಕಲ್ ಜಿ ಡಿ ಭದ್ರಣ್ಣ ಹಾಗೂ ಕಾಲೇಜಿನ ನಿರ್ದೇಶಕ ಉಪನ್ಯಾಸಕರಾದ ರವಿ ಎಲ್ ಅರಸಿದ್ದಿ ಮತ್ತು ವೀರೇಶ ಡಿ ಬಾಚೇನಹಳ್ಳಿ ಹಾಗೂ ಬಸವರಾಜ ತುಂಬಗಿಯವರು ಉಪಸ್ಥಿತರಿದ್ದರು ಕಾಯ9ಕ್ರಮದಲ್ಲಿ ಆರೋಗ್ಯ ಇಲಾಖೆಯವರು ಅಜೀಮ್ ಪ್ರೇಮ್ ಫೌಂಡೇಶನ್ ಸ್ವಯಂಸೇವಕರು, ಆಶಾಕಾಯ9ಕತ9ರು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಉಪನ್ಯಾಸಕರಾದ ಪ್ರಕಾಶ ಎಸ್ ನಾಲತವಾಡ ಕಾಯ9ಕ್ರಮ ನಡೆಸಿಕೊಟ್ಟರು.

ವರದಿ: ವಿನೋದ ಬಾರಿಗಿಡದ ಇಳಕಲ್

error: