May 2, 2024

Bhavana Tv

Its Your Channel

ಅತ್ಯಂತ ರೋಚಕ ತಿರುವು ಪಡೆದ ಬೆಳಗಾವಿ ಲೋಕಸಭಾ ಕ್ಷೇತ್ರ

ಅತ್ಯಂತ ರೋಚಕ ತಿರುವು ಪಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಶ್ರೀಮತಿ ಮಂಗಳ ಅಂಗಡಿಯವರು ಜಯಭೇರಿ ಭಾರಿಸುವುದರೊಂದಿಗೆ ಫಲಿತಾಂಶವು ಬಿಜೆಪಿಯ ಪಾಲಿಗೆ ಮಂಗಳದಾಯಕವಾಗಿದೆ.ಪಚುನಾವಣೆ

ಬೆಳಗಾವಿ ; ಅತ್ಯಂತ ಪ್ರತಿಷ್ಠೆಯ ಈ ಚುನಾವಣೆಯಲ್ಲಿ, ಬಿಜೆಪಿ ಜಯ ಸಾಧಿಸುವುದರೊಂದಿಗೆ ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿಜೀ ಮತ್ತು ರಾಜ್ಯದಲ್ಲಿ ಶ್ರೀ ಯಡಿಯೂರಪ್ಪಜೀ ಅವರ ನೇತೃತ್ವದ ಸರ್ಕಾರ ಜನಪರ ಕಾರ್ಯಕ್ರಮಗಳೊಂದಿಗೆ ಜನರ ಮನಸ್ಸನ್ನು ಗೆದ್ದಿದೆ ಎಂಬುವುದು ಸಾಬೀತಾಗಿದೆ.

ಬೆಳಗಾವಿಯ ಮತದಾರರು ಶ್ರೀಮತಿ ಮಂಗಳ ಅವರನ್ನು ಗೆಲ್ಲಿಸುವುದರೊಂದಿಗೆ ಅವರ ಪತಿ ದಿವಂಗತ ಶ್ರೀ ಸುರೇಶ್ ಅಂಗಡಿ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗಿದೆ.
ಕಾAಗ್ರೆಸ್ ಪಕ್ಷವು ಈ ಕ್ಷೇತ್ರದಲ್ಲಿ ಇನ್ನಿಲ್ಲದ ತಂತ್ರಗಳನ್ನು ನಡೆಸಿದರೂ ಸಹ ಬಿಜೆಪಿಯ ಒಗ್ಗಟ್ಟಿನ ಮತ್ತು ಸಂಘಟನೆಯ ಬಲದಿಂದ ವಿಜಯ ಸಾಧ್ಯವಾಗಿದೆ.
ಈ ಅಭೂತಪೂರ್ವ ಜಯ ತಂದುಕೊಟ್ಟ ಮತದಾರರಿಗೆ ಮತ್ತು ಈ ಚುನಾವಣೆಯಲ್ಲಿ ಶ್ರಮಿಸಿದ ಎಲ್ಲ ಬಿಜೆಪಿ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಮಂಗಲಾ ಅಂಗಡಿಯವರು ಹಾರ್ದಿಕ ವಂದನೆ ಸಲ್ಲಿಸಿದ್ದಾರೆ.

ವರದಿ ; ಮಹೇಶ ಶರ್ಮಾ, ಬೆಳಗಾವಿ

error: