April 27, 2024

Bhavana Tv

Its Your Channel

ಗಂಧದಗುಡಿ ಚಿತ್ರ ಬಿಡುಗಡೆ ಹಾಗೂ ದಲಿತ ಪ್ಯಾಂಥರ್ಸ ಸ್ಮರಣಾರ್ಥ ಕಪ್ಪುಚಿರತೆ ದತ್ತು ಪಡೆದ ನಂಜನಗೂಡು ಕ್ಷೇತ್ರದ ಶಾಸಕರಾದ ಹರ್ಷವರ್ಧನ್!

ಗುಂಡ್ಲುಪೇಟೆ:- ಕನ್ನಡ ಚಲನಚಿತ್ರರಂಗದ ಮೇರುನಟ ದಿವಂಗತ ಡಾ.ಪುನೀತ್ ರಾಜಕುಮಾರ್ ಅಭಿನಯದ ಗಂಧದಗುಡಿ ಚಲನಚಿತ್ರದ ಬಿಡುಗಡೆ ಹಾಗೂ ದಲಿತ್ ಪ್ಯಾಂಥರ್ಸ್ ಸಂಘಟನೆಯ ಸ್ಮರಣಾರ್ಥ ಶಾಸಕರಾದ ಬಿ.ಹರ್ಷವರ್ಧನ್ ಅವರು ನಂಜನಗೂಡಿನ ಜನತೆಯ ಹೆಸರಿನಲ್ಲಿ ಮೈಸೂರು ಮೃಗಾಲಯದ ಬ್ಲಾಕ್ ಪ್ಯಾಂಥರ್ ಅನ್ನು ದತ್ತು ಸ್ವೀಕರಿಸಿದ್ದಾರೆ.

೨೦೨೨ರ ಅಕ್ಟೋಬರ್ ೨೮ರಿಂದ ಮುಂದಿನ ವರ್ಷ ೨೦೨೩ರ ಅಕ್ಟೋಬರ್ ೨೭ರವರೆಗೆ ಬ್ಲಾಕ್ ಪ್ಯಾಂಥರ್ (ಕಪ್ಪು ಚಿರತೆ) ದತ್ತು ಪಡೆದಿರುವ ಅವರು ಈ ಸಂಬAಧ ಮೃಗಾಲಯ ಪ್ರಾಧಿಕಾರಕ್ಕೆ ರೂ ೫೦ ಸಾವಿರ ರೂಗಳ ಚೆಕ್ ಪಾವತಿಸಿದ್ದಾರೆ. ನಂಜನಗೂಡಿನಲ್ಲಿ ಈ ಕುರಿತು ಗುರುವಾರ ಮಾಹಿತಿ ನೀಡಿ ಮಾತನಾಡಿದ ಶಾಸಕರಾದ ಬಿ.ಹರ್ಷವರ್ಧನ್ ಅವರು ಚಿತ್ರನಟ ಡಾ.ಪುನೀತ್ ರಾಜಕುಮಾರ್ ಅವರು ಕನ್ನಡನಾಡು ನುಡಿಯ ಹಿರಿಮೆಯನ್ನು ಸಾರುವ ಜೊತೆಗೆ ಅಮೂಲ್ಯ ವನ್ಯಜೀವಿ ಹಾಗೂ ಪ್ರಕೃತಿ ಸಂಪತ್ತಿನ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ತೋರಿದ್ದರು. ಅವರು ಅಭಿನಯಿಸಿರುವ ಕೊನೆಯ ಚಿತ್ರ ಗಂದಧಗುಡಿ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾಗಿದೆ ಇದರ ಸವಿನೆನಪಿನಲ್ಲಿ ಹಾಗೂ ೭೦ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿAದ ಪ್ರೇರೇಪಿತರಾಗಿದ್ದ ಯುವ ಜನರು ದಲಿತ ಪ್ಯಾಂಥರ್ಸ ಮೂವ್ಮೆಂಟ್ ಪ್ರಾರಂಭಿಸಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿರೋಧ ತೋರಿ ಭಾರತದ ರಾಜಕೀಯದಲ್ಲಿ ಮಹತ್ವದ ಹೆಜ್ಜೆ ಗುರುತು ಮೂಡಿಸಿದ್ದರು ಹೀಗಾಗಿ ದಲಿತ್ ಪ್ಯಾಂಥರ್ ಸಂಘಟನೆಯ ಸ್ಮರಣಾರ್ಥ ಮೈಸೂರು ಮೃಗಾಲಯದಲ್ಲಿ ಬ್ಲಾಕ್ ಪ್ಯಾಂಥರ್ (ಕಪ್ಪು ಚಿರತೆ) ಪ್ರಾಣಿಯನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದ ಜನರ ಹೆಸರಿನಲ್ಲಿ ದತ್ತು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

ಮನುಷ್ಯರಂತೆ ಪ್ರಾಣಿ ಪಕ್ಷಿಗಳೂ ಸಹ ಜೀವಿಸುವ ಹಕ್ಕನ್ನು ಹೊಂದಿದ್ದು ಮೈಸೂರು ಮೃಗಾಲಯದಲ್ಲಿ ದೇಶ ವಿದೇಶಗಳ ಹಲವು ಪ್ರಭೇಧದ ಪ್ರಾಣಿ ಪಕ್ಷಿಗಳಿವೆ ಅವುಗಳನ್ನು ಮೈಸೂರು ಮೃಗಾಲಯದಲ್ಲಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ವಿಶ್ವದ ಹಲವೆಡೆ ಮೃಗಾಲಯಗಳಿದ್ದರೂ ಮೈಸೂರು ಮೃಗಾಲಯ ವಿಭಿನ್ನವಾಗಿದ್ದು ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ ಹೀಗಾಗಿ ಬ್ಲಾಕ್ ಪ್ಯಾಂಥರ್ ಪ್ರಾಣಿಯನ್ನು ಒಂದು ವರ್ಷಗಳ ಕಾಲದ ನಿರ್ವಹಣೆಯ ವೆಚ್ಚವನ್ನು ಪಾವತಿಸಿ ದತ್ತು ಸ್ವೀಕರಿಸಿದ್ದೇನೆ ಎಂದು ಶಾಸಕರಾದ ಬಿ.ಹರ್ಷವರ್ಧನ್ ಅವರು ತಿಳಿಸಿದರು.

ವರದಿ: ಸದಾನಂದ ಕನ್ನೇಗಾಲ

error: