April 28, 2024

Bhavana Tv

Its Your Channel

ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶಿವಸ್ವಾಮಿರವರ ಮೇಲೆ ಸುಳ್ಳು ಆರೋಪ.

ಗುಂಡ್ಲುಪೇಟೆ ತಾಲೂಕಿನ ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶಿವಸ್ವಾಮಿಯವರನ್ನು ಸುಳ್ಳು ಆರೋಪ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿ ಮಾಧ್ಯಮಗಳಲ್ಲಿ ಸುದ್ದಿ ಮಾಡಿಸಿರುವುದು ದುರುದ್ದೇಶ ಪೂರ್ವಕವಾಗಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಕೆಲವು ದುಷ್ಕರ್ಮಿಗಳು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿ ಇಟ್ಟುಕೊಂಡು ಜನರ ಕಷ್ಟ ಸುಖಕ್ಕೆ ಸ್ಪಂದಿಸುತ್ತಾ ಜನಸ್ನೇಹಿ ವೈದ್ಯರಾಗಿರುವ ಡಾಕ್ಟರ್ ಶಿವಸ್ವಾಮಿರವರಿಗೆ ತೊಂದರೆ ಕೊಡುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿರುತ್ತಾರೆ ಅದಕ್ಕೆ ನಮ್ಮ ತೀವ್ರ ಖಂಡನೆ ಇದ್ದು ಪದೇಪದೇ ದಲಿತ ವೈದ್ಯ ಎನ್ನುವ ಕಾರಣಕ್ಕೆ ತೊಂದರೆ ಕೊಡುತ್ತಿದ್ದರೆ.ಕಾನೂನು ಬದ್ಧ ಹೋರಾಟ ಹಾಗೂ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದಾಗಿ ಮಾನವ ಹಕ್ಕುಗಳ ಜಿಲ್ಲಾ ಕಾರ್ಯದರ್ಶಿ ಮುತ್ತಣ್ಣ ,ಹಾಗೂ ದಲಿತ ಮುಖಂಡರಾದ ಹೋರೆಯಲ ಕೃಷ್ಣ ,ಬಲಚವಾಡಿ ರವಿ, ಬೇಗೂರು ಸದಾ,ರವರು ಈ ಮಾಧ್ಯಮದ ಮುಖಾಂತರ ಎಚ್ಚರಿಕೆಯನ್ನು ನೀಡಿದ್ದಾರೆ.

ವರದಿ: ಸದಾನಂದ ಕನ್ನೆಗಾಲ

error: