April 26, 2024

Bhavana Tv

Its Your Channel

ಎರಡನೇಯ ಕಾರ್ತಿಕ ಸೋಮವಾರದಂದು ವಿಜೃಂಭಣೆಯಿoದ ನಡೆದ ಶ್ರೀ ಸೋಮೇಶ್ವರ ಪೂಜೆ.

ಗುಂಡ್ಲುಪೇಟೆ ತಾಲೂಕಿನ ಕನ್ನೆಗಾಲ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಬೀದಿಗಳಲ್ಲಿ ಹುಲಿವಾನ ಉತ್ಸವ ಹಾಗೂ ಶ್ರೀಸೋಮೇಶ್ವರ ವಿಗ್ರಹ ಮತ್ತು ವೀರಗಾಸೆ ಸಮೇತ ಕಾರ್ಯಕ್ರಮಕ್ಕೆ ಮೆರಗು ತಂದವು.

ಎರಡನೇ ಕಾರ್ತಿಕ ಸೋಮವಾರ ದಿನದಂದು ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಅರ್ಚಕರಾದ ನಾಗಪ್ಪ ರವರು ವಿಶೇಷ ಪೂಜೆ ನೆರವೇರಿಸಿದರು. ನಂತರ ಬಂದAತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು.

ಗ್ರಾಮದ ಹಿರಿಯ ಮುಖಂಡರುಗಳಾದ ಗುರುಮಲ್ಲಪ್ಪ, ಕೆ.ಎಸ್. ಮಲ್ಲಿಕಾರ್ಜುನ,ರಾಜಪ್ಪ, ಮಾದಪ್ಪ, ವೀರಭದ್ರಪ್ಪ, ರುದ್ರಪ್ಪ, ಪಟೇಲ್ ಶಾಂತ ಮಲ್ಲಪ್ಪ, ಲಿಂಗಪ್ಪ ಕೆಎಂ, ಕೆಎಂ ಸಿದ್ದಪ್ಪ, ಹೊಸಟ್ಟಿ ಮಹದೇವಪ್ಪ, ನಂಜಪ್ಪ, ನಂದೀಶ್ ಕೆಎನ್, ಕೆಎಂ ಮಹಾದೇವಪ್ಪ , ಜಯರಾಮು, ತೋಟದ ಮನೆ ಎಚ್ ಸಿ ಮಾದಪ್ಪ ಹಾಗೂ ಶ್ರೀ ವಿನಾಯಕ ಗೆಳೆಯರ ಬಳಗದ ನೂರಾರು ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ: ಸದಾನಂದ ಕನ್ನೇಗಾಲ

error: