May 17, 2024

Bhavana Tv

Its Your Channel

ಬೂತ್ ವಿಜಯ ಅಭಿಯಾನಕ್ಕೆ ಶಾಸಕರಿಂದ ಚಾಲನೆ

ಗುಂಡ್ಲುಪೇಟೆ ತಾಲೂಕಿನ ಬರಗಿ ಮಹಾಶಕ್ತಿಕೇಂದ್ರದ ವ್ಯಾಪ್ತಿಯ ಮೂಕಹಳ್ಳಿ ಕಾಲೋನಿಯಲ್ಲಿ ಬೂತ್ ಅಧ್ಯಕ್ಷರಾದ ಸಂತೋಷ ಅವರ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ರವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಬಿಜೆಪಿಯ ಈ ಅಭಿಯಾನ ವಿಧಾನಸಭಾ ಕ್ಷೇತ್ರದ್ದಾದ್ಯಂತ ಎಲ್ಲಾ ಬೂತ್ ಗಳಲ್ಲಿ ನಡೆಯುತ್ತಿದೆ. ಬೂತ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೂತ್ ವಸ್ತು ಸ್ಥಿತಿಯನ್ನು ತಿಳಿದು ಬೂತ್ ಸಮಿತಿಯನ್ನು ರಚಿಸಿ ಪ್ರತಿಯೊಂದು ಪೇಜ್ ಗಳಿಗೂ ಪೇಜ್ ಪ್ರಮುಖರನ್ನ ನೇಮಿಸಿ ಕನಿಷ್ಠ 25 ಮನೆಗಳಲ್ಲಿ ಪಕ್ಷದ ಧ್ವಜ ಹಾರಿಸುವುದು, ಅಲ್ಲದೆ ವಾಟ್ಸಪ್ ಗ್ರೂಪ್ ಮಾಡಿ ನಮ್ಮ ಪಕ್ಷದ ಕಾರ್ಯಕರ್ತರು ಕಟ್ಟ ಕಡೆಯ ಬೂತನ್ನು ತಲುಪಿ ಕೆಲಸ ನಿರ್ವಹಿಸುತ್ತಿದ್ದಾರೆ ಕೇಂದ್ರ ಸರ್ಕಾರದ ಯೋಜನೆ ಹಾಗೂ ರಾಜ್ಯ ಸರ್ಕಾರದ ಯೋಜನೆ ಹಾಗೂ ನಿಕಟ ಪೂರ್ವ ಮುಖ್ಯಮಂತ್ರಿಯಾದ ಬಿಎಸ್ ಯಡಿಯೂರಪ್ಪ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ನಮಗೆ ಶ್ರೀರಕ್ಷೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಬರಗಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಂಚಳ್ಳಿ ಬಾಬು ,ಸಿ. ಮಹದೇವ ಪ್ರಸಾದ್, ಸಂತೋಷ್, ಸಿದ್ದಯ್ಯ ಸಿದ್ದರಾಜು , ಇನ್ನು ಮುಂತಾದ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೆಗಾಲ

error: