May 17, 2024

Bhavana Tv

Its Your Channel

ಕಡಬೂರು ಮಂಜುನಾಥ್‌ಗೆ ರೈತ ಸಂಘ ಬೆಂಬಲ, ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ

ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ ಕಡಬೂರು ಮಂಜುನಾಥ್ ರವರು ಕಳೆದ 15 ವರ್ಷದಿಂದ ರೈತ ಸಂಘದಲ್ಲಿ ಬೆಳೆದು ಬಂದಿದ್ದಾರೆ ಸಮಾಜದಲ್ಲಿ ಬಡವರಿಗೆ ಶ್ರಮಿಕರಿಗೆ ಮತ್ತು ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ದೀನದಲಿತರ ಪರ ನಿಂತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ. ಹಾಗೆಯೇ ಜೆಡಿಎಸ್ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ನಡೆದ ಪಂಚರತ್ನ ರಥಯಾತ್ರೆ ಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಕಡಬೂರು ಮಂಜುನಾಥ್ ಹೆಸರನ್ನು ತಿಳಿಸಿದ್ದು ನಮಗೆ ಸಂತೋಷದ ವಿಷಯವಾಗಿದೆ .ಹಾಗಾಗಿ ನಮ್ಮ ಬೆಂಬಲ ಕಡಬೂರು ಮಂಜುನಾಥ್‌ಗೆ ಎಂದು ರೈತ ಮುಖಂಡರುಗಳು ಈ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಕುಂದುಕೆರೆ ಸಂಪತ್ತು ,ತಾಲೂಕು ಅಧ್ಯಕ್ಷರಾದ ಹೋಸೂರು ಮಹೇಶ್, ಹಾಲಹಳ್ಳಿ ಮಹೇಶ್, ಷಣ್ಮುಗ ಸ್ವಾಮಿ, ನಾಗರಾಜು, ಬೆಟ್ಟಹಳ್ಳಿ ಗುರು, ಹಕ್ಕಲಪುರ ಮಹೇಶ್ ,ಸ್ವಾಮಿ ಇನ್ನು ಮುಂತಾದ ರೈತ ಮುಖಂಡರುಗಳು ಉಪಸ್ಥಿತರಿದ್ದರು.

ವರದಿ:ಸದಾನಂದ ಕನ್ನೆಗಾಲ

error: