ಬಾಗೇಪಲ್ಲಿ:-ತಾಲ್ಲೂಕು ಡಿ.ಸಿ.ಸಿ ಬ್ಯಾಂಕ್ ಬಾಗೇಪಲ್ಲಿ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಪಾತಪಾಳ್ಯ ಸೇವಾ ಸಹಕಾರ ಅಭಿವೃದ್ಧಿ ಬ್ಯಾಂಕ್ ಸಂಘದ ಸದಸ್ಯರಿಗೆ ಕೆ.ಸಿ.ಸಿ. ಬೆಳೆ ಸಾಲ ವಿತರಣೆ ಕಾರ್ಯಕ್ರಮಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ವಿ.ವೆಂಕಟಶಿವಾರೆಡ್ಡಿ ರವರು ಚಾಲನೆ ನೀಡಿದರು.
ಈ ವೇಳೆ ಅರ್ಹ ೧೫೮ ರೈತ ಫಲಾನುಭಾವಿಗಳಿಗೆ ೧,೪೧,೬೬ ಸಾವಿರ ರೂಪಾಯಿಗಳು ಬೆಳೆ ಸಾಲ ವಿತರಣೆ ಮಾಡಲಾಯಿತು. ನಂತರ ಮಾತನಾಡಿ ವಿ.ವೆಂಕಟಶಿವಾರೆಡ್ಡಿ ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆ ಡಿ.ಸಿ.ಸಿ.ಬ್ಯಾಂಕ್ ನಂಬರ್ ಒನ್ ಬ್ಯಾಂಕುಗಳಾಗಿವೆ. ರೈತ ಫಲಾನುಭವಿಗಳು ಈ ಸಾಲವನ್ನು ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಹೇಳಿದರು
ಮುಂದಿನ ದಿನಗಳಲ್ಲಿ ನಮ್ಮ ಸಂಘಕ್ಕೆ ಇನ್ನು ಹೆಚ್ಚು ಹೆಚ್ಚು ಬಡ್ಡಿ ರಹಿತ ಸಾಲವನ್ನು ನೀಡಿ ನಮ್ಮ ಬ್ಯಾಂಕ್ ನ್ನ ನಂಬರ್ ಒನ್ ಸ್ಥಾನಕ್ಕೆ ಹೇರಿಸಲು ಅವಿರತ ಪ್ರಯತ್ನ ಮಾಡುತ್ತೇವೆ ಎಂದರು,
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕ್ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ವಿ.ವೆಂಕಟಶಿವಾರೆಡ್ಡಿ ಹಾಗೂ ಪಾತಪಾಳ್ಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕ ಶ್ರೀನಿವಾಸ್, ಆಹಾರ ಪಡಿತರ ವಿತರಕರಾದ ಸೀತರೆಡ್ಡಿ, ಗಂಗರಾಜು, ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಕೆ.ವಿ. ರಾಮಚಂದ್ರರೆಡ್ಡಿ, ಉಪಾಧ್ಯಕ್ಷ ಗುಜ್ಜೆಪಲ್ಲಿ ವೆಂಕಟರಾAರೆಡ್ಡಿ, ಹಾಗೂ ಸದಸ್ಯರಾದ ಅಶ್ವತ್ಥ್ ರೆಡ್ಡಿ,ರಾಮಲಕ್ಷ್ಮಮ್ಮ, ವೆಂಕಟಸ್ವಾಮಿ, ಅಬೂಬಕ್ಕರ್, ಹಾಗೂ ಪಾತಪಾಳ್ಯ ಸಹಕಾರಿ ಬ್ಯಾಂಕಿನ ಎಲ್ಲಾ ಸದಸ್ಯರು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.
ವರದಿ : ಗೋಪಾಲ ರೆಡ್ಡಿ, ಬಾಗೆಪಲ್ಲಿ
More Stories
ಬಾಗೇಪಲ್ಲಿ ಮಂಡಲ: ಮಹಿಳಾ ಕಾರ್ಯಕಾರಿಣಿ ಸಭೆ
ತಾಲ್ಲೂಕಿನಲ್ಲಿ ನಿಲ್ಲದ ನರೇಗಾ ಅಕ್ರಮಗಳು; ಕಣ್ಮುಚ್ಚಿ ಕುಳಿತ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳು?
ದೇಶದ ೫೦ ಕೋಟಿ ಜನರಿಗೆ ಕೋವಿಡ್ ಲಸಿಕೆ :- ಬಿಜೆಪಿ ಜಿಲ್ಲಾದ್ಯಕ್ಷ ರಾಮಲಿಂಗಪ್ಪ