ಬಾಗೇಪಲ್ಲಿ:- ಪಟ್ಟಣದ ಪದವಿ ವಿಧ್ಯಾರ್ಥಿಗಳ ನಿಲಯದ ಆವರಣದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತೇಜ್ ಆನಂದ ರೆಡ್ಡಿ ಸನ್ಮಾನಿಸಿದರು.
ತದನಂತರ ಮಾತನಾಡಿ ಕೋವಿಡ್ ಮಹಾಮಾರಿಯ ವಿರುದ್ದ ಹೋರಾಡುತ್ತಿರುವ ಕರೋನಾ ಕೋವಿಡ್ ಕೇಂದ್ರಗಳು ಬಹುತೇಕ ವಿಧ್ಯಾರ್ಥಿ ನಿಲಯದಲ್ಲಿ ನಡೆಸುತ್ತಿದ್ದು ಅಲ್ಲಿ ಸಿಬ್ಬಂದಿ ಕೋವಿಡ್ ನಿರ್ವಹಣೆ ಕೆಲಸ ಮಾಡುತ್ತಿರುವ ಕರೋನ ವಾರಿಯರ್ಸ್ ಗಳಾದ ಗೋಪಿ ನಾಯಕ್,ವೀರ ಸುದರ್ಶನ್,ಲಕ್ಷ್ಮೀ, ಸರೋಜ,ಮೀನಾಕ್ಷಿ, ಚಂದ್ರಶೇಖರ್,ರಾಮಾAಜಿ ರವರಿಗೆ ಆತ್ಮೀಯವಾಗಿ ಹಾಗೂ ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿ ಹಾಗೂ ಗ್ರೂಪ್ ಡಿ ಸಿಬ್ಬಂದಿ ವರ್ಗದವರಿಗೆ ಪ್ರೋತ್ಸಾಹಿಸಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರು ವೈಯಕ್ತಿಕವಾಗಿ ಪ್ರೀತಿಯಿಂದ ಶಾಲು ಹೊದಿಸಿ ಹೂಗುಚ್ಚ ನೀಡಿ ಸಿಹಿ ನೀಡುವುದರ ಮೂಲಕ ಗೌರವಿಸಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಕೊರೊನಾ ನಿಯಂತ್ರಣಕ್ಕಾಗಿ ಅಗತ್ಯ ಸೌಲಭ್ಯಗಳು ದೊರೆಯುತ್ತಿವೆ, ವಾರಿಯರ್ಸ್ಗಳು ತಮ್ಮ ಕುಟುಂಬದಿAದ ದೂರ ಉಳಿದು ಕೊರೊನಾ ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ. ವಾರಿಯರ್ಸ್ ಗಳಿಗೆ ಗೌರವಿಸುವದು, ಸನ್ಮಾನಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮ ದಲ್ಲಿ ಜಿಲ್ಲಾ ವ್ಯವಸ್ಥಾಪಕರಾದ ರಾಜಣ್ಣ ಬಾಗೇಪಲ್ಲಿ ಸಹಾಯಕ ನಿರ್ದೇಶಕರಾದ ಶೇಷಾದ್ರಿ , ವಾರ್ಡನ್ ಗಳಾದ ನಾಗರಾಜ್, ಶಿಲ್ಪ, ಶಿವಪ್ಪ, ನವೀದ್, ಚಾಂದ್ ಪೀರ್, ಸುರೇಶ್, ಈಶ್ವರಪ್ಪ, ನಾರಾಯಣಸ್ವಾಮಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.
ವರದಿ:- ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು.
More Stories
ಬಾಗೇಪಲ್ಲಿ ಮಂಡಲ: ಮಹಿಳಾ ಕಾರ್ಯಕಾರಿಣಿ ಸಭೆ
ತಾಲ್ಲೂಕಿನಲ್ಲಿ ನಿಲ್ಲದ ನರೇಗಾ ಅಕ್ರಮಗಳು; ಕಣ್ಮುಚ್ಚಿ ಕುಳಿತ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳು?
ದೇಶದ ೫೦ ಕೋಟಿ ಜನರಿಗೆ ಕೋವಿಡ್ ಲಸಿಕೆ :- ಬಿಜೆಪಿ ಜಿಲ್ಲಾದ್ಯಕ್ಷ ರಾಮಲಿಂಗಪ್ಪ