ವರದಿ : ರಾ.ನ.ಗೋಪಾಲ ರೆಡ್ಡಿ, ಬಾಗೇಪಲ್ಲಿ .
ಬಾಗೇಪಲ್ಲಿ; ಸರ್ಕಾರಿ ಸಾರಿಗೆ ಬಸ್ ಚಾಲಕರು ಮತ್ತು ನಿರ್ವಹಕರು ಕೋರೊನ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುವ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿ ಫೆಡರೇಷನ್ ಅಧ್ಯಕ್ಷ ಎ.ಸತೀಶ್ ಆರೊಪಿಸಿದ್ದಾರೆ. ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಮಾರ್ಗದಲ್ಲಿ ಸಂಚಾರ ಮಾಡುವ ಸರ್ಕಾರಿ ಹಾಗೂ ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರು ಸರಿಯಾದ ಸಮಯಕ್ಕೆ ಬಸ್ ತಲಿಪಿಸುವಲ್ಲಿ ವಿಫಲರಾಗಿದ್ದಾರೆ ಜೊತೆಗೆ ಸರ್ಕಾರ ಕೋವಿಡ್-೧೯ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ಗಳಲ್ಲಿ ಪ್ರಯಾಣಿಸುವ ಪ್ರಾಯಣಿಕರಿಗೆ ಯಾವುದೆ ಅನಾರೋಗ್ಯಕ್ಕೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೋರೊನ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಸಂಚರಿಸುವ ಬಸ್ ನಲ್ಲಿ ೪೦ ರಿಂದ ೫೦ ಪ್ರಾಯಣಿಕರಿಗೆ ಮಾತ್ರ ಆವಕಾಶ ನೀಡಿದೆ ಇವರು ೮೦ ರಿಂದ ೯೦ ಪ್ರಾಯಣಿಕರನ್ನು ತುಂಬಿಸಿಕೊAಡು ಸರ್ಕಾರಿ ಅದೇಶಗಳನ್ನು ಗಾಳಿಗೆತೂರಿ ಇಷ್ಟ ಬಂದAತೆ ರ್ವತಿಸುತ್ತಿರುವುದು ಸರಿಯಲ್ಲ, ತಕ್ಷಣ ಸಂಭAಧ ಪಟ್ಟ ಅಧಿಕಾರಿಗಳು ಚಾಲಕರ ಹಾಗೂ ನಿರ್ವಹಕರ ವಿರುದ್ದ ಕಾನೂನು ಕ್ರಮ ಜರಗಿಸುವಂತೆ ಒತ್ತಯಿಸಿದ್ದಾರೆ. ಈ ಸಂದರ್ಭದಲ್ಲಿ ಪವನ್ ಕುಮಾರ್, ವಿನೋದ್ ಕುಮಾರ್ ,ಸಂತೊಷ್, ಶೇಖರ್, ಬಾಲಜಿ, ಜಗದೀಶ್, ಹರ್ಷ, ವೇಣು, ವೆಂಕಟೇಶ್ ಇದ್ದರು.
More Stories
ಬಾಗೇಪಲ್ಲಿ ಕ್ಷೇತ್ರದ 3 ಲಕ್ಷ ನಾಗರೀಕರಿಗೆ ಪೂರ್ಣ ಪ್ರಮಾಣದಲ್ಲಿ ಉಚಿತ ಹೆಲ್ತ್ ಕಾರ್ಡ್ ವಿತರಣೆ
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ
ಗುರಿ ಮುಟ್ಟಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು- ಡಾ. ಎ.ಹೆಚ್.ರಾಮರಾವ್