
ಭಟ್ಕಳ: ತಾಲ್ಲೂಕಿನಲ್ಲಿ ಕರೋನಾ ವೈರಸ್ ಶಂಕಿತ ವ್ಯಕ್ತಿಯೋರ್ವ ಶನಿವಾರದಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಇವರಿಗೆ ಕರೋನಾ ವೈರಸ್ ಸೋಂಕು ನೆಗೆಟಿವ್ ಎಂದು ವರದಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಭಾನವಾರದಂದು ಓರ್ವ ಮಹಿಳೆ ಕರೋನಾ ಶಂಕೆಯ ಹಿನ್ನೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಭಟ್ಕಳದಲ್ಲಿ ಇದುವರೆಗೆ ಕರೋನಾ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವರ ಸಂಖ್ಯೆ ೨ಕ್ಕೆ ಇರಿದೆ. ಆದರೆ ಇದುವರೆಗೂ ಭಟ್ಕಳದಲ್ಲಿ ಯಾವುದೇ ಕರೋನಾ ವೈರಸ್ ಇರುವ ವ್ಯಕ್ತಿಗಳು ಪತ್ತೆಯಾಗಿಲ್ಲವಾಗಿದೆ
ಈ ಮಹಿಳೆ ವಾರದ ಹಿಂದಷ್ಟೇ ವಿದೇಶದಿಂದ ಭಟ್ಕಳಕ್ಕೆ ವಾಪಸ್ಸಾಗಿದ್ದು ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಕೆಯ ಗಂಟಲಿನ ದ್ರವ್ಯ ಲೇಪನ ಪರೀಕ್ಷೆಗಾಗಿ ಶಿವಮೊಗ್ಗೆ ಕಳುಹಿಸಿಕೊಡಲಾಗಿದ್ದು ಈಕೆಗೆ ಕರೋನಾ ವೈರಸ್ ಇದೆಯೋ ಇಲ್ಲವೆಂದು ವರದಿ ಬಂದ ಮೇಲೆಯೇ ತಿಳಿದು ಬರಬೇಕಿದೆ
ಈ ನಡುವೆ ಕರೋನಾ ಭಯದಿಂದ ಶನಿವಾರವಷ್ಟೇ ಕರೋನ ಕೊಠಡಿ ಸೇರಿದ ನಲವತ್ತು ವರ್ಷದ ಪ್ರಾಯದ ವ್ಯಕ್ತಿ ರಕ್ತ ಗಂಟಲಿನ ದ್ರವ ಲೇಪನ ವರದಿ ನೆಗೆಟಿವ್ ಅಂಶ ಪತ್ತೆಯಾಗಿದ್ದು ಇಲ್ಲಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ ಆದರೆ ಇದನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಲು ರಕ್ತ ಹಾಗೂ ಗಂಟಲಿನÀ ದ್ರವ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವೈದ್ಯಾಧಿ ಮೂಲಗಳು ತಿಳಿಸಿವೆ
More Stories
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಪ್ರಸಿದ್ಧ ವೈದ್ಯ ಡಾ. ವೆಂಕಟರಮಣ ಹೆಗಡೆ ಹಾಗೂ ಸಂಗೀತಾ ಹೆಗಡೆ ಅವರಿಗೆ ಹುಕ್ಕೇರಿ ಶ್ರೀಗಳಿಂದ ಗೌರವ.
ಭಟ್ಕಳ: ಚುನಾವಣೆ ಎದುರಿಸಲು ನನ್ನ ಬಳಿ ಹಣ ಇದ್ದಿಲ್ಲ. ಮಹೀಳೆಯರು ತಮ್ಮಲ್ಲಿರುವ ಚಿನ್ನವನ್ನು ಅಡವು ಇಟ್ಟು ನನಗೆ ಹಣ ತಂದುಕೊಟ್ಟಿದ್ದಾರೆ. ನಾನು ಯಾವತ್ತೂ ಹಣವನ್ನು ಪ್ರೀತಿಸಲಿಲ್ಲ, ಮನುಷ್ಯರನ್ನು ಪ್ರೀತಿಸಿದ್ದೇನೆ ಎಂದು ನೂತನವಾಗಿ ನೇಮಕಗೊಂಡಿರುವ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು