April 13, 2024

Bhavana Tv

Its Your Channel

ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಕೃಷ್ಣರಾಜಪೇಟೆ ಪಟ್ಟಣ ಹಾಗೂ ಹೋಬಳಿ ಕೇಂದ್ರಗಳಲ್ಲಿ ಮುಂದುವರೆದ ಮುಂಜಾಗರೂಕತಾ ಕ್ರಮಗಳು…

ಮಾರ್ಚಿ 31 ರವರೆಗೆ ಹೋಟೆಲ್ ಗಳು, ಬಾರ್ ರೆಸ್ಟೋರೆಂಟ್ ಗಳು, ಅಂಗಡಿ ಮುಂಗಟ್ಟುಗಳು ಬಂದ್, ತಾಲೂಕು ಆಡಳಿತದೊಂದಿಗೆ ಸಹಕರಿಸಲು ತಹಶೀಲ್ದಾರ್ ಎಂ.ಶಿವಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್ ಮನವಿ…
ತಾಲ್ಲೂಕಿನಾಧ್ಯಂತ ಶುಭ ಸಮಾರಂಭಗಳು, ವಿವಾಹಗಳು, ಜಾತ್ರೆಗಳು, ಹಬ್ಬಗಳು ಉತ್ಸವಗಳು ಬಂದ್, ಮಾರ್ಚಿ 31ರವರೆಗೂ ಔಷಧ ಅಂಗಡಿಗಳು ಹಾಗೂ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಎಲ್ಲಾ ವ್ಯವಹಾರಗಳು ಬಂದ್, ಯುಗಾಧಿ ಹಬ್ಬವನ್ನು ತಾವಿರುವಲ್ಲಿಯೇ ಸರಳವಾಗಿ ಆಚರಿಸಿ, ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಿ, ಕೆ.ಆರ್.ಪೇಟೆಯಿಂದ ಮುಂಬೈಗೆ ಹೋಗುವ ಮುಂಬೈನಿಂದ ಕೆ.ಆರ್.ಪೇಟೆ ಪಟ್ಟಣಕ್ಕೆ ಬರುವ ಬಸ್ಸುಗಳ ಸಂಚಾರ ಬಂದ್ ಮಾಡಲಾಗಿದೆ…ಗ್ರಾಮಕ್ಕೆ ಹೊಸದಾಗಿ ಬರುವವರ ಮೇಲೆ, ಅಪರಿಚಿತರ ಮೇಲೆ ನಿಗಾ ಇಡಲು ತಹಶೀಲ್ದಾರ್ ಶಿವಮೂರ್ತಿ ಸೂಚನೆ…
ಕರೋನಾ ವೈರಸ್ ನಿಯಂತ್ರಣ ಹಾಗೂ ಕರೋನಾ ನಿರ್ಮೂಲನೆಗೆ ತಾಲೂಕು ಆಡಳಿತದೊಂದಿಗೆ ಸಹಕರಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಲು ತಹಶೀಲ್ದಾರ್ ಶಿವಮೂರ್ತಿ ಮನವಿ ಮಾಡಿದರು…
ಪತ್ರಿಕಾಗೋಷ್ಠಿಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್, ಉಪತಹಶೀಲ್ದಾರ್ ರಾಮಚಂದ್ರಪ್ಪ ಮತ್ತು ರಾಜಶ್ವನಿರೀಕ್ಷಕಿ ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು…

error: