April 19, 2024

Bhavana Tv

Its Your Channel

ಕೊರೋನ ಮಹಾಮಾರಿಗೆ ಮಂಗಳೂರಿನಲ್ಲಿ ಮಹಿಳೆಯ ಮೊದಲ ಬಲಿ

ಮಂಗಳೂರು : ಕೊರೋನ ಮಾಹಾಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ ಎಂದು ತಿಳಿದು ಬಂದಿದೆ.ಬಂಟ್ವಾಳ ಮೂಲದ ಮಹಿಳೆ ಸಾವನ್ನಪ್ಪಿದ್ದಾರೆ.ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ 45 ವರ್ಷದ ಮಹಿಳೆ‌ ಎನ್ನಲಾಗಿದೆ.

ಉಸಿರಾಟದ ತೊಂದರೆಯಿಂದ ನಿನ್ನೆ ಬಂಟ್ವಾಳ ತಾಲೂಕು ಆಸ್ಪತ್ರೆಗೆ ತೋರಿಸಿದ್ದರು.ಅಲ್ಲಿಂದ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು.ಥ್ರೋಟ್ ಸ್ಕ್ವಾಬ್ ನ್ನು ನಿನ್ನೆಯೇ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು.ಇಂದು ಬೆಳಗ್ಗೆ ತೀವ್ರ ಉಸಿರಾಟದ ತೊಂದರೆಯಿಂದ ಮಹಿಳೆ ಸಾವನ್ನಪ್ಪಿದ್ದಾರೆ.

ಸ್ಯಾಂಪಲ್ ಟೆಸ್ಟ್ ವರದಿ ಬರುವ ಮೊದಲೇ ಮಹಿಳೆಯ ಸಾವು ನಡೆದಿದೆ.ಈಗ ಬಂದ ವರದಿಯಲ್ಲಿ ಕೊರೊನ ಪಾಸಿಟಿವ್ ಎಂದು ತಿಳಿಯಲಾಗಿದೆ.ಮಂಗಳೂರಿನಲ್ಲಿ ಕೊರೊನ ಸೋಂಕಿನಿಂದ ಸಾವಿನ ವಿಚಾರ,ಮೃತರ ಪತಿ, ಮಗ ಕ್ವಾರಂಟೈನ್.ಅತ್ತೆಯ ಸ್ಥಿತಿ ಗಂಭೀರವಾಗಿ ಐಸಿಯುನಲ್ಲಿ ಚಿಕಿತ್ಸೆ.ಮೂವರ ಥ್ರೋಟ್ ಸ್ವ್ಕಾಬ್ ಸಂಗ್ರಹಿಸಿ ಪರೀಕ್ಷೆಮೃತ ಮಹಿಳೆ ಮಗ ಮಾ.16 ರಂದು ದುಬೈನಿಂದ ಬಂದಿದ್ದ ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ತೀವ್ರ ನಿಗಾ.ಬಂಟ್ವಾಳ ಕೆಳಗಿನ ಪೇಟೆ ಸೀಲ್ ಡೌನ್.ಸೀಲ್ ಡೌನ್ ಆಗಿದೆ,ಯಾರು ಮನೆಯಿಂದ ಹೊರಬರಬೇಡಿ ಅಂತಾ ಅನೌನ್ಸ್ಮೆಂಟ್.ಬಂಟ್ವಾಳ ನಗರ ಪೊಲೀಸರಿಂದ ಜೀಪ್ ನಲ್ಲಿ ಅನೌನ್ಸ್.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಈ ಪ್ರಕರಣ ನಡೆದಿದೆ

error: