
ಹೊನ್ನಾವರ: ಜಿಲ್ಲೆಯಲ್ಲಿ ಅತಿ ದೊಡ್ಡದಾದ ಸಾರಿಗೆ ಉದ್ಯಮದ ಮೂಲಕ ಚಿರಪರಿಚಿತವಾದ ಎಸ್.ಆರ್.ಟಾವೆಲ್ಸ ಹಲವು ವಿಧದಲ್ಲಿ ಸಾರ್ವಜನಿಕರಿಗೆ ನೆರವಾಗುತ್ತಿದೆ. ಮಾಲಕರಾದ ವೆಂಕ್ರಟಮಣ ಹೆಗಡೆ(ಪುಟ್ಟ ಹೆಗಡೆ) ಕರೋನಾ ಸಂಕಷ್ಟದ ಸಮಯದಲ್ಲಿ ದಿನಸಿ ಕಿಟ್ ಸೇರಿದಂತೆ ವಿವಿಧ ರೀತಿಯಲ್ಲಿ ನೆರವಾಗಿದ್ದರು. ಇಂದು ಉಡುಪಿಯ ಫ್ಯಾಕರಿಯಿಂದ ಉತ್ತರಪ್ರದೇಶದ ರಾಜ್ಯಕ್ಕೆ ತೆರಳಲು ನಡೆದುಕೊಂಡು ಬರುತ್ತಿದ್ದರು. ತಮ್ಮ ಕಛೇರಿಯ ಮುಂಭಾಗದಲ್ಲಿ ಇದನ್ನು ಗಮನಿಸಿ ತನ್ನ ಸಿಬ್ಬಂದಿವರ್ಗದ ಸಹಕಾರದ ಮೇರೆಗೆ ವೆಂಕ್ರಟಮಣ ಹೆಗಡೆ ಎಲ್ಲರಿಗೂ ಲಘು ಉಪಾಹಾರ, ಕುಡಿಯುವ ನೀರು ಒದಗಿಸಿರುದಲ್ಲದೇ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ವಂತ ಖರ್ಚಿನಲ್ಲಿ ಖಾಸಗಿ ವಾಹನದ ಮೂಲಕ ಹುಬ್ಬಳ್ಳಿಯವರೆಗೆ ತಲುಪಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ. ಶ್ರೀಕುಮಾರ ಸಂಸ್ಥೆಯ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.