![](https://kannada.bhavanatv.com/wp-content/uploads/2020/02/01-1-1024x768.jpg?v=1581787685)
ಹೊನ್ನಾವರ ೧೫: ಕಡ್ಲೆ ಗ್ರಾಮದ ವೆಂಕಟ್ರಮಣ ಹೆಗಡೆ ಎಂಬುವವರ ಮೇಲೆ ಚಿರತೆ ಎರಗಿದಾಗ ಗಂಭೀರ ಗಾಯಗೊಂಡರು ಧೈರ್ಯದಿಂದ ಎದುರಿಸಿ ಚಿರತೆಯನ್ನು ಎದುರಿಸಿದ ಘಟನೆ ನಡೆದಿದೆ.
ನಿನ್ನೆ ಸಂಜೆ ೫-೦೦ ಗಂಟೆ ಸುಮಾರು ಕಡ್ಲೆ ಗ್ರಾಮದ ತಿರುವಿನಲ್ಲಿ ತನ್ನ ಮನೆಯಿಂದ ೫೦ ಅಡಿ ದೂರ ಬೆಟ್ಟಕ್ಕೆ ಹೋದಾಗ ಗುರ್ ಎಂದು ಸಪ್ಪಳ ಮಾಡುತ್ತ ಚಿರತೆ ಮೈಮೆಲೆ ಎರಗಿದಾಗ ಬಲಗೈಯಿಂದ ತಡೆದ. ಮತ್ತೆ ಎರಗಿದಾಗ ಎಡಗೈಯಿಂದ ತಡೆದ. ಎರಡು ಕೈ ಗಾಯವಾದಮೇಲೆ ಚಿರತೆ ಮೈಮೇಲೆ ಹಾರಿದಾಗ ನೆಲಕ್ಕೆ ಬಿದ್ದ. ಆಗ ಕೈಗೊಂದು ಕಲ್ಲು ಸಿಕ್ಕಿತು. ಬಿದ್ದ ಹೊಡೆತಕ್ಕೆ ಬಲಗೈ ಮುರಿದಿತ್ತು. ಮತ್ತೆ ಎರಗಿದಾಗ ಮುರಿದ ಕೈಯಿಂದಲೇ ಕಲ್ಲನ್ನು ಎತ್ತಿ ಚಿರತೆ ತಲೆಗೆ ಗುದ್ದಿದಾಗ ಅದು ಓಡಿಹೋಗಿದೆ.
ಸರಕಾರಿ ಆಸ್ಪತ್ರೆಗೆ ದಾಖಲಾಗಿ ಈ ಹೊಯ್ಸಳ ವೆಂಕಟ್ರಮಣ ತಿಮ್ಮಣ್ಣ ಹೆಗಡೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ವರ್ಷದಿಂದ ಅಂಕೋಲಾ, ದಾಂಡೇಲಿ, ಹೊನ್ನಾವರ ಭಾಗದ ಕಿರು ಅರಣ್ಯ ಪ್ರದೇಶದ ಜನವಸತಿ ಇರುವಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ದನಗಳನ್ನು ತಿಂದಿದೆ. ನಿನ್ನೆ ಮನುಷ್ಯರ ಮೇಲೆ ಎರಗಿದೆ. ಧೈರ್ಯವಂತನಾಗಿದ್ದರಿAದ ಉಳಿದುಕೊಂಡಿದ್ದಾನೆ ವೆಂಕಟ್ರಮಣ. ಅರಣ್ಯ ಇಲಾಖೆ ಎಚ್ಚರವಹಿಸಬೇಕಾಗಿದೆ.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.