ಭಟ್ಕಳ: ಅಕ್ರಮವಾಗಿ ಬುಲೆರೊ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನಗರಠಾಣೆ ಪೊಲೀಸರು ಬಂಧಿಸಿ, ವಶಕ್ಕೆ ಪಡೆದ ಘಟನೆ ಪಟ್ಟಣದ ಕೋಕ್ತಿ ನಗರದಲ್ಲಿ ಭಾನುವಾರ ನಡೆದಿದೆ.
ಪಟ್ಟಣದ ಜಾಗಟೆಬೈಲ್ ಹನೀಫಾಬಾದ ನಿವಾಸಿ ಮಹ್ಮದ್ ಮುಸಾಧಿಕ್, ಅಜಾದ ರೋಡ್ ಮಗ್ದುಂ ಕಾಲನಿ ನಿವಾಸಿ ಮಹ್ಮದ್ ಸವೂದ್, ಜಾಮಿಯಾಬಾದ ನಿವಾಸಿ ಸದ್ದಾಂ ಹುಸೇನ್,ಹೇರಿಕೇರಿ ನಿವಾಸಿ ರಫಿಕ್ ಮುಸ್ತಾಫ ಬಂಧಿತರು. ಇವರು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಕಳುವು ಮಾಡಿಕೊಂಡು ಕೋಕ್ತಿನಗರಕ್ಕೆ ತರುವಾಗ ನಗರಠಾಣೆಯ ಪೊಲೀಸರು ಆರೋಪಿ ಸಮೇತ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರ ಠಾಣೆ ಪಿ.ಎಸ್.ಐ ಭರತ ನಾಯಕ ದೂರು ನೀಡಿ ಎಎಸ್ಐ ನಾರಾಯಣ ಜಿ ಬೊಯರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಕಾರ್ಯಾಚರಣೆಯಲ್ಲಿ ,ಈರಣ್ಣ ಪೂಜಾರಿ,ದಿನೇಶ ನಾಯಕ, ಲೋಕಪ್ಪ ಕಟ್ಟಿ ಕುಬೇರ ಹೊಸೂರ್ ಮುಂತಾದವರು ಉಪಸ್ಥಿತರಿದ್ದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.