May 4, 2024

Bhavana Tv

Its Your Channel

ಬುಲೆರೊ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ, ನಾಲ್ವರು ಆರೋಪಿಗಳ ಬಂದನ

ಭಟ್ಕಳ: ಅಕ್ರಮವಾಗಿ ಬುಲೆರೊ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನಗರಠಾಣೆ ಪೊಲೀಸರು ಬಂಧಿಸಿ, ವಶಕ್ಕೆ ಪಡೆದ ಘಟನೆ ಪಟ್ಟಣದ ಕೋಕ್ತಿ ನಗರದಲ್ಲಿ ಭಾನುವಾರ ನಡೆದಿದೆ.
ಪಟ್ಟಣದ ಜಾಗಟೆಬೈಲ್ ಹನೀಫಾಬಾದ ನಿವಾಸಿ ಮಹ್ಮದ್ ಮುಸಾಧಿಕ್, ಅಜಾದ ರೋಡ್ ಮಗ್ದುಂ ಕಾಲನಿ ನಿವಾಸಿ ಮಹ್ಮದ್ ಸವೂದ್, ಜಾಮಿಯಾಬಾದ ನಿವಾಸಿ ಸದ್ದಾಂ ಹುಸೇನ್,ಹೇರಿಕೇರಿ ನಿವಾಸಿ ರಫಿಕ್ ಮುಸ್ತಾಫ ಬಂಧಿತರು. ಇವರು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಕಳುವು ಮಾಡಿಕೊಂಡು ಕೋಕ್ತಿನಗರಕ್ಕೆ ತರುವಾಗ ನಗರಠಾಣೆಯ ಪೊಲೀಸರು ಆರೋಪಿ ಸಮೇತ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರ ಠಾಣೆ ಪಿ.ಎಸ್.ಐ ಭರತ ನಾಯಕ ದೂರು ನೀಡಿ ಎಎಸ್‌ಐ ನಾರಾಯಣ ಜಿ ಬೊಯರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಕಾರ್ಯಾಚರಣೆಯಲ್ಲಿ ,ಈರಣ್ಣ ಪೂಜಾರಿ,ದಿನೇಶ ನಾಯಕ, ಲೋಕಪ್ಪ ಕಟ್ಟಿ ಕುಬೇರ ಹೊಸೂರ್ ಮುಂತಾದವರು ಉಪಸ್ಥಿತರಿದ್ದರು.

error: