April 27, 2024

Bhavana Tv

Its Your Channel

ನಾಟಕ ಎನ್ನುವುದು ಕೌಟುಂಬಿಕ ಸಂಬOಧಕ್ಕಿOತ ಸಮಾಜದ ಅನಿಷ್ಟಗಳಿಗೆ ಕನ್ನಡಿ ಹಿಡಿಯುವ ವೇದಿಕೆಯಾಗಬೇಕು – ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್

ಹೊನ್ನಾವರ: ತಾಲೂಕಿನ ಖರ್ವಾ-ಕೊಳಗದ್ದೆ ಸಿದ್ದಿವಿನಾಯಕ ಪ್ರೌಢಶಾಲೆಯ ಆವಾರದಲ್ಲಿ ಯಶಸ್ವಿನಿ ಸಾಂಸ್ಕçತಿಕ ವೇದಿಕೆ ಇವರ ಆಶ್ರಯದಲ್ಲಿ ೧೭ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಮತ್ತು ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಹೇಳುವ ಸತ್ಯಕ್ಕೆ ಬದ್ದನಾಗಿರುವ ಲೇಖಕ, ನಾಟಕಕಾರ, ಶಿಕ್ಷಕ, ಸಮಾಜದ ಸೇವಕ ಸತ್ಯ ಪ್ರತಿಪಾದಕನಾಗಿ ತೋರುತ್ತಾನೆ. ಇಂತಹ ಬದ್ದತೆ ಇದ್ದರೆ ಮಾತ್ರ ಉತ್ತಮ ಸಮಾಜವು ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಯಶಸ್ವಿನಿ ವೇದಿಕೆ ಯಶÀಸ್ಸಿನ ಸೋಪಾನವಾಗಲಿ ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಖರ್ವಾ ಗ್ರಾ.ಪಂ ಅಧ್ಯಕ್ಷ ಮಾಬ್ಲ ನಾಯ್ಕ ಮಾತನಾಡಿ ತಂದೆ ತಾಯಂದಿರು ತಮ್ಮ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಡಬೇಕು. ಎಲ್ಲಾ ಸಮಾಜದವರನ್ನು ಒಗ್ಗುಡಿಸಿಕೊಂಡು ಸಾಂಸ್ಕçತಿಕ ಕಾರ್ಯಕ್ರಮಗಳ ಆಯೋಜಿಸಿ ಸಾಧಕರನ್ನು ಸನ್ಮಾನಿಸುತ್ತಿದೆ. ಸಂಘದ ಕಾರ್ಯಚಟುಚಟಿಕೆ ಇನ್ನು ಹೆಚ್ಚಿನ ರೀತಿಯಲ್ಲಿ ಮುಂದುವರೆದು ಯಶಸ್ವಿನಿ ಸಂಘ ಯಶಸ್ವಿಯಾಗಿ ಮುನ್ನುಗಲಿ ಎಂದು ಶುಭಕೋರಿದರು.
ನಿವೃತ್ತ ಶಿಕ್ಷಕ ಯಲಗುಪ್ಪಾ ಚೆನ್ನಕೇಶವ ಪರಮೇಶ್ವರ ಹೆಗಡೆ, ವಿದ್ಯುತ್ ಗುತ್ತಿಗೆದಾರ ಎಸ್.ಕೆ ಶೆಟ್ಟಿ ಹಡಿನಬಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು

error: