May 30, 2023

Bhavana Tv

Its Your Channel

ಭಟ್ಕಳ ತಾಲುಕಿನ ಸರ್ಪನಕಟ್ಟೆಯ ಸೋಡಿಗದ್ದೆ ಕ್ರಾಸ್‌ನಲ್ಲಿರುವ ಅಯ್ಯಪ್ಪ ಸನ್ನಿದಾನದ ಪುನರ್ ಪ್ರತಿಷ್ಟಾಪನೆಯ ಕಾರ್ಯಕ್ರಮ

ಭಟ್ಕಳ ತಾಲೂಕಿನ ಸೋಡಿಗದ್ದೆ ಕ್ರಾಸ್ ನಲ್ಲಿರುವ ಸನ್ನಿಧಾನವು ಸುಂದರ ಹಾಗೂ ಭಕ್ತಿ ಸಂಪನ್ನ ಅಯ್ಯಪ್ಪನ ಕಂಚಿನ ಮೂರ್ತಿಯಿಂದ ಸುಮಾರು ೨೯ ವರ್ಷಗಳಿಂದ ಸ್ಥಾಪಿಸಲ್ಪಟ್ಟಿದ್ದು. ಸಾವಿರಾರು ಭಕ್ತರು ಹಾಗೂ ಮಾಲಾಧಾರಿಗಳು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿ ಕೊಂಡು ಬರುತ್ತಿದ್ದಾರೆ ಗುರುವಾರ ಅಯ್ಯಪ್ಪ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಲಾಯಿತು, ಬುದುವಾರ ರಂದು ಆರಂಭವಾದ ದೇವತ ಕಾರ್ಯ, ಗುರುವಾರದಂದು ಬೆಳಗ್ಗೆ ಹೋಮ್ ಹವನ ನಂತರ
ಮೂರ್ತಿಯನ್ನು ಪುರ್ನ ಪ್ರತಿಷ್ಠಾಪನಾ ನಂತರ ಸಾವಿರಾರು ಅಯ್ಯಪ್ಪ ಭಕ್ತರ ಸಮೂಕ ದಲ್ಲಿ ಮಹಾಪೂಜೆ ಮತ್ತು ಮಂಗಳಾರತಿ ನೆಡೆಯಿತು. ನಂತರ ಅನ್ನಸಂತರ್ಪಣೆ ನೆಡೆಯಿತು. ಈ ಸಂದರ್ಭದಲ್ಲಿ ಅಯ್ಯಪ್ಪ ದೇವಸ್ಥಾನ ಕಮೀಟಿ ಇಂದ ಅರ್ಚಕರಿಗೆ ಮತ್ತು ಮಂಜುನಾಥ ನಾಯ್ಕ ಗುರು ಸ್ವಾಮಿಯ ತಂದೆ ಮತ್ತು ತಾಯಿಗೆ,ಹಾಗೂ ಮಂಜುನಾಥ ನಾಯ್ಕ ಕಾರಗ್ಗದೆ ಕುಟುಂಬದವರಿಗೆ ಮತ್ತು ಇನ್ನುಳಿದ ದಾಳಿಗಳಿಗೆ ಸನ್ಮಾನಿಸಿ ಗೌರವಿಸಿದರು.
,ಸಂಜೆ ಹರಿ ಸೇವೆ ಕುಣಿತ,ಭಜನೆ, ರಾತ್ರಿ ೮:೩೦ ಕ್ಕೆ ಮಹಾ ಪೂಜೆ,ನಂತರ ಪ್ರವಚನ ಸಭೆ, ಹಾಗೂ ರಾತ್ರಿ ಮನರಂಜನಾ ಕಾರ್ಯಕ್ರಮ ನೆಡೆಯಿತು.

About Post Author

error: