May 8, 2024

Bhavana Tv

Its Your Channel

ಹೊನ್ನಾವರ ರಾಮತೀರ್ಥ ಕ್ರಾಸ್ ಹತ್ತಿರ ಅಂಬುಲೆನ್ಸ್ ವಾಹನ ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಅಪಘಾತ ಒಂದು ಸಾವು

ಹೊನ್ನಾವರ ; ಗೋಕರ್ಣದಿಂದ ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಗೆ ತರುತ್ತಿದ್ದ ಆಂಬುಲೆನ್ಸ್ ವಾಹನಕ್ಕೆ ಮಂಗಳೂರಿನಿ0ದ ಕುಮಟಾ ಕಡೆಗೆ ಹೋಗುವ ಗ್ಯಾಸ್ ಟ್ಯಾಂಕರ್ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದು ಗುರುವಾರ ಸಂಜೆ ೪:೧೫ ಗಂಟೆ ಸುಮಾರಿಗೆ ಹೊನ್ನಾವರ ಪಟ್ಟಣದ ರಾಮತೀರ್ಥ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೬೬ ರಲ್ಲಿ ಢಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಅಂಬುಲೆನ್ಸ್ ನಲ್ಲಿದ ಪಿಡ್ಸ್ ಖಾಯಿಲೆ ಪೀಡಿತ ರಾಮಕೃಷ್ಣ ಗಣಪತಿ ಪ್ರಸಾದ ಪ್ರಾಯ ೭೦ ವರ್ಷ ಗೋಕರ್ಣ ಇವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.


ಅಂಬುಲೆನ್ಸ್ ಚಾಲಕರಾದ ಜಾನು ದತ್ತಾ ನಾಯ್ಕ ಬಗ್ಗೋಣ ಕ್ರಾಸ್ ಕುಮಟಾ ಇವರು ಗಂಭೀರ ಗಾಯಗೊಂಡಿದ್ದು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ಕಳಿಸಲಾಗಿದ್ದು ಅಂಬುಲೆನ್ಸ್ ವಾಹನದಲ್ಲಿ ಪೇಷಂಟ್ ಜೊತೆಗಿದ್ದ ಬಾಲಚಂದ್ರ ಗಣಪತಿ ಪ್ರಸಾದ್ ಗೋಕರ್ಣ ಹಾಗೂ ಸುಮನಾ ರಾಮಾ ಗೌಡ ತಾಳಮಕ್ಕಿ ಗೋಕರ್ಣ ಇವರು ಅಪಘಾತದಲ್ಲಿ ಗಾಯಗೊಂಡಿದ್ದು ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ಯಾಸ್ ಟ್ಯಾಂಕರ್ ಲಾರಿ ಚಾಲಕ ಪರಾರಿಯಾಗಿದ್ದು, ಅಪಘಾತ ಸ್ಥಳದಿಂದ ಅಪಘಾತಕ್ಕೀಡಾದ ವಾಹನಗಳನ್ನು ಸ್ಥಳಾಂತರಿಸಿ ರಸ್ತೆ ಸಂಚಾರ ಸುಗಮಗೊಳಿಸಲಾಗಿದ್ದು. ಅಪಘಾತದ ಬಗ್ಗೆ ಗ್ಯಾಸ್ ಟ್ಯಾಂಕರ್ ಲಾರಿ ಚಾಲಕನ ವಿರುದ್ದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.

error: