May 3, 2024

Bhavana Tv

Its Your Channel

ರೋಣದಲ್ಲಿ ವಿಶ್ವಕರ್ಮ ದಿನಾಚರಣೆ

ರೋಣ:– ರೋಣ ನಗರದಲ್ಲಿ ವಿಶ್ವಕರ್ಮ ದಿನಾಚರಣೆಯನ್ನಆಚರಿಸಲಾಯಿತು
ವಿಶ್ವಕರ್ಮ ಯುವಕ ಸಂಘ, ಶ್ರೀ ವಿಶ್ವಕರ್ಮ ಸೇವಾ ಟ್ರಸ್ಟ್ ಕಮಿಟಿ ರೋಣ, ಶ್ರೀ ಕಾಳಿಕಾದೇವಿ ಸುಧಾರಣಾ ಸಮಿತಿ, ಶ್ರೀ ಕಾಳಿಕಾದೇವಿ ಮಹಿಳಾ ಮಂಡಳ ರೋಣ ಇವರ ವತಿಯಿಂದ ವಿಶ್ವಕರ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ ಎಸ್ ಪಾಟೀಲ್ ಮಾತನಾಡಿ ಶಿಲ್ಪಕಲೆ ಕಲ್ಲಿನಲ್ಲಿ ಆಗಿರಬಹುದು ಮಣ್ಣಿನಲ್ಲಿ ಆಗಿರಬಹುದು ಮರದ ಕೊಂಬೆಯಲ್ಲಿ ಆಗಿರಬಹುದು ಇನ್ನು ಹಲವಾರು ರೀತಿಯಿಂದ ಕುಲಕಸುಬನ್ನು ಮಾಡುತ್ತಾ ಬಂದAತ ಕುಟುಂಬವೆAದರೆ ಅದು ವಿಶ್ವಕರ್ಮ ಕುಟುಂಬವೆAದು ಹೇಳಲಿಕ್ಕೆ ನನಗೆ ಸಂತೋಷವೆನಿಸುತ್ತದೆ
ಈಗಿನ ಯುವಕರಲ್ಲಿ ನಾಡಿನ ಕಲೆ ಸಂಸ್ಕೃತಿ ಉಳಿಸಿಕೊಂಡು ಬಂದoತ ಸಮಾಜವೆಂದರೆ ಅದು ವಿಶ್ವಕರ್ಮ ಸಮಾಜವೆಂದು ಈ ಸಂದರ್ಭದಲ್ಲಿ ಹೇಳಲಿಕ್ಕೆ ನನಗೆ ತುಂಬಾ ಸಂತೋಷವಾಗುತ್ತದೆ
ಈ ಕಾರಣದಿಂದಾಗಿ ತಾವೆಲ್ಲರೂ ಕೂಡಿಕೊಂಡು ಈ ಒಂದು ಜಯಂತಿಯನ್ನು ನಮ್ಮೆಲ್ಲರ ಜಯಂತಿ ಎಂದು ಆಚರಿಸುತ್ತಿದ್ದೀರಿ ಇದಕ್ಕೆ ಮಹಿಳೆಯರಕೂಡ ಸಂಘಟನೆ ಮೂಲಕ ತೊಡಗಿರಬಹುದುಇನ್ನು ಹೆಚ್ಚಿನ ಬಲ ಬಂದAತಾಗಿದೆ ಎಂದು ಅವರು ಹೇಳಿದರು

ಅದೇ ರೀತಿ ಹೊಳೆಆಲೂರಿನ ಶ್ರೀ ಎಚ್ಚರೇಶ್ವರ ಮಹಾಸ್ವಾಮಿಗಳು ಆಶೀರ್ವಚನವನ್ನು ನೀಡಿದರು.ಅದೇ ರೀತಿ ಅಭಿನವ ಎಚ್ಚರೇಶ್ವರ ಮಹಾಸ್ವಾಮಿಗಳು ಶಿರೋಳ ಇವರು ಮಾತನಾಡಿ ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ದುಡಿಯೋಣ ಎಂದು ಹೇಳಿದರು

ಅದೇ ರೀತಿ ಶಿವಾನಂದ ಮಠದ ಶ್ರೀ ಶ್ರೀ ಶ್ರವಣಕುಮಾರ ಮಹಾಸ್ವಾಮೀಜಿ ಮಾತನಾಡಿ ಇದೇ ರೀತಿ ಎಲ್ಲರೂ ಕೂಡಿ ಇಂತಹ ಮಹಾನುಭಾವರ ಜಯಂತಿ ಕಾರ್ಯಕ್ರಮವನ್ನು ಸದಾ ಒಗ್ಗಟ್ಟಿನಿಂದ ಕಾರ್ಯಕ್ರಮವನ್ನು ಪ್ರತಿವರ್ಷ ಮುನ್ನಡೆಸಿಕೊಂಡು ಹೋಗಿ ಎಂದು ಅವರು ಹೇಳಿದರು

ಈ ಕಾರ್ಯಕ್ರಮದಲ್ಲಿ ರೋಣದ ಎಲ್ಲ ವಿಶ್ವಕರ್ಮದ ಸಮಾಜದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ

error: