April 26, 2024

Bhavana Tv

Its Your Channel

ಪ್ರಧಾನಿ ನರೇಂದ್ರ ಮೋದಿ ಮತ್ತು ಪಂಡಿತ ದೀನದಯಾಳ ಉಪಾಧ್ಯಾಯರವರ ಹುಟ್ಟು ಹಬ್ಬದ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಅಭಿಯಾನ

ರೋಣ: ಇಂದು ನರಗುಂದ ಮತಕ್ಷೇತ್ರದ ಹೊಳೆಆಲೂರ ಮಂಡಲ ಬಿಜೆಪಿ ಎಸ್.ಸಿ ಮೋರ್ಚಾದ ವತಿಯಿಂದ ಪಂಡಿತ ದೀನದಯಾಳ ಉಪಾಧ್ಯಾಯ ರವರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಅಭಿಯಾನದ ಮೂಲಕ ಕೌಜಗೇರಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಶಾಲೆಯ ಆವರಣವನ್ನು ಸ್ವಚ್ಚತೆ ಮಾಡಲಾಯಿತು.

ಈ ಸಂಧರ್ಬದಲ್ಲಿ ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಮುತ್ತಣ್ಣ ಜಂಗಣ್ಣವರ, ಮಂಡಲ ಬಿಜೆಪಿ ಕಾರ್ಯದರ್ಶಿ ಸೋಮು ಚರೇದ, ಗ್ರಾ.ಪಂ.ಸದಸ್ಯರಾದ ಸುರೇಶಗೌಡ ಪಾಟೀಲ, ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶರಣು ಬರಶೆಟ್ಟಿ, ಹೊಳೆಆಲೂರ ಮಂಡಲ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಶೇಖಪ್ಪ ಮಾದರ, ಮಂಡಲ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುದಿಯಪ್ಪ ದಾನಿ, ಗದಗ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಶರಣು ಚಲವಾದಿ, ಹೊಳೆಆಲೂರ ಮಂಡಲ ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷರಾದ ಮಂಜು ಚುಲಕಿ, ಯಲ್ಲಪ್ಪ ಚಲವಾದಿ, ರಾಜು ಕೊಳ್ಳಪ್ಪನವರ, ಬಸು ನಾಯಕರ್, ಕರಿಯಪ್ಪ ಚಲವಾದಿ, ಕುಮಾರ್ ಕಾಳೆ, ಶ್ರೀ ಶರಣು ಕೊಳ್ಳಪ್ಪನವರ ಗ್ರಾಮದ ಪಕ್ಷದ ಮುಖಂಡರು, ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಮುತ್ತಣ್ಣ ಜಂಗಣ್ಣವರ ಮಾತನಾಡಿದರು.
ವರದಿ
ವೀರಣ್ಣ ಸಂಗಳದ

error: