ಪಾಂಡವಪುರ ; ಕೊರೊನಾ ಎರಡನೇ ಅಲೆಯಿಂದಾಗಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಸೋಂಕಿತರ ಆರೈಕೆಗಾಗಿ ಸಮಾಜ ಸೇವಕ, ವಕೀಲ ಅರವಿಂದ್ ರಾಘವನ್ ಅವರಿಂದ 10 ಲಕ್ಷ ರೂ.ವೆಚ್ಚದಲ್ಲಿ 6 ಆಕ್ಸಿಜನ್ ಕಾನ್ಸಟೇಟರ್, 10 ಐಸಿಯು ಬೆಡ್ ಜತೆ ಸೈಡ್ ಟೇಬಲ್ ಗಳು, 20 ಪಿಪಿಇ ಕಿಟ್ ಹಾಗೂ 20 ಆಕ್ಸಿ ಮೀಟರ್ ಗಳ ಕೊಡುಗೆ.
ಆಸ್ಪತ್ರೆಗೆ ಅರವಿಂದ್ ರಾಘವನ್ ನೀಡಿದ ಈ ಎಲ್ಲಾ ಕೊಡುಗೆಗಳನ್ನು ಶಾಸಕ ಸಿ.ಎಸ್.ಪುಟ್ಟರಾಜು ಅವರು ಉಪವಿಭಾಗೀಯ ಆಸ್ಪತ್ರೆ ಮುಖ್ಯ ಆಡಳಿತಾ ವೈದ್ಯಾಧಿಕಾರಿ ಡಾ.ಎಚ್.ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ವೃತ್ತಿಯಲ್ಲಿ ವಕೀಲರಾಗಿರುವ ಅರವಿಂದ ರಾಘವನ್ ಮೇಲುಕೋಟೆ ಕ್ಷೇತ್ರದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಶಿಕ್ಷಣ ಕ್ಷೇತ್ರವಲ್ಲದೇ ಇತರೆ ಕ್ಷೇತ್ರಗಳಿಗೆ ಹತ್ತು-ಹಲವಾರು ಕೊಡುಗೆ ನೀಡಿರುವ ಅರವಿಂದ್ ರಾಘವನ್ ಅವರು, ಇದೀಗ ಆಸ್ಪತ್ರೆಗೆ 10ಲಕ್ಷ ರೂ. ವೆಚ್ಚದಲ್ಲಿ ಆಕ್ಸಿಜನ್ ಕಾನ್ಸಟೇಟರ್, ಐಸಿಯು ಬೆಡ್, ಪಿಪಿಇ ಕಿಟ್ ಹಾಗೂ ಪಲ್ಸ್ಆಕ್ಸಿ ಮೀಟರ್ ಕೊಡುಗೆ ನೀಡಿರುವುದು ಶ್ಲಾಘನೀಯ ಎಂದರು.
ಈ ವೇಳೆ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಕುಮಾರ್, ಟಿಎಚ್ಒ ಡಾ.ಸಿ.ಎ.ಅರವಿಂದ, ಪುರಸಭೆ ಸದಸ್ಯರಾದ ಎಂ.ಗಿರೀಶ್, ಬಿ.ವೈ.ಬಾಬು, ಮನ್ ಮುಲ್ ನಿರ್ದೇಶಕ ಕೆ.ರಾಮಚಂದ್ರ, ಶಿಕ್ಷಕರಾದ ಮಾಣಿಕ್ಯನಹಳ್ಳಿ ಜಯರಾಂ, ಪ.ಮ.ನಂಜುಂಡ ಸ್ವಾಮಿ, ಮೇನಾಗ್ರ ಪ್ರಕಾಶ್ ಇತರರಿದ್ದರು…
ವರದಿ.. ಟಿ ಎಸ್ ಶಶಿಕಾಂತ್ ಶೆಟ್ಟಿ, ಮಂಡ್ಯ.. ಪಾಂಡವಪುರ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ