May 2, 2024

Bhavana Tv

Its Your Channel

ಮಂಡ್ಯ ಜಿಲ್ಲಾ ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಯುವ ಘಟಕ ಉದ್ಘಾಟನೆ

ಬೃಹತ್ ಉಚಿತ ಆರೋಗ್ಯ ತಪಾಸಣೆ ಮುಖಾಂತರ ಮಂಡ್ಯ ಜಿಲ್ಲಾ ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಯುವ ಘಟಕ ಉದ್ಘಾಟನೆ ನೆರವೇರಿಸಿದ ಹೇಮಗಿರಿ ಬಿಜಿಎಸ್ ಶಾಖಾಮಠದ ಕಾರ್ಯದರ್ಶಿಗಳದ ಡಾ: ಜೆ ಎನ್ ರಾಮಕೃಷ್ಣೇಗೌಡ ಮತ್ತು ಮಾಜಿ ಶಾಸಕ ಕೆ ಬಿ ಚಂದ್ರಶೇಖರ್ ರವರು.. ಯುವಕರ ಉತ್ತಮ ಕಾರ್ಯ ಶ್ಲಾಘನೀಯ ವ್ಯಕ್ತಪಡಿಸಿದ ಜೆಡಿಎಸ್ ಹಿರಿಯ ಮುಖಂಡ ಬಸ್ ಕೃಷ್ಣೇಗೌಡ

ಕೆ ಆರ್ ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಕೃಷ್ಣಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕರ್ನಾಟಕ ಮಾನವ ಹಕ್ಕು ಜನ ಸೇವಾ ಸಮಿತಿ ಮಂಡ್ಯ ಜಿಲ್ಲಾ ಯುವ ಘಟಕ ಉದ್ಘಾಟನಾ ಕಾರ್ಯಕ್ರಮ ಅಂಗವಾಗಿ ಗ್ರಾಮೀಣ ಪ್ರದೇಶ ಜನರ ಆರೋಗ್ಯಕರ ಹಿತದೃಷ್ಟಿಯಿಂದ ನೂತನ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಕಿಕ್ಕೇರಿ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ನಾರಾಯಣ ಮಲ್ಟಿಸ್ಪೆಷಾಲಿಟಿ ಮೈಸೂರು ಆಸ್ಪತ್ರೆ ಸಹಾಯದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹೇಮಗಿರಿ ಬಿಜಿಎಸ್ ಶಾಖಾಮಠದ ಕಾರ್ಯದರ್ಶಿಗಳಾದ ಡಾ: ಜೆ ಎನ್ ರಾಮಕೃಷ್ಣೇಗೌಡ ಮತ್ತು ಮಾಜಿ ಶಾಸಕ ಕೆ ಬಿ ಚಂದ್ರಶೇಖರ್ ಹಾಗೂ ಕರ್ನಾಟಕ ಮಾನವ ಹಕ್ಕು ಜನಸೇವಾ ರಾಜ್ಯ ಅಧ್ಯಕ್ಷ ಗಣೇಶ್ ಗೌಡ ಅವರ ನೇತೃತ್ವದಲ್ಲಿ ಉದ್ಘಾಟನೆ ನೆರವೇರಿಸಿದರು…

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬಸ್ ಕೃಷ್ಣೇಗೌಡ ರವರು ಈಗಿನ ಕೆಲಯುವಜನತೆ ದುಶ್ಚಟಗಳನ್ನು ಮೈಗೂಡಿಸಿಕೊಂಡು ಸಮಾಜದ ದಿಕ್ಕು ತಪ್ಪಿಸುತ್ತಿರುವ ಯುವಕರ ನಡುವೆ ಕರ್ನಾಟಕ ಮಾನವ ಹಕ್ಕು ಜನಸೇವಾ ಸಮಿತಿ ಜಿಲ್ಲಾ ಘಟಕ ಉದ್ಘಾಟನಾ ಕಾರ್ಯಕ್ರಮ ಅಂಗವಾಗಿ ಗ್ರಾಮೀಣ ಪ್ರದೇಶದ ಜನತೆ ಆರೋಗ್ಯ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ರಮ ಯುವಪೀಳಿಗೆ ರೂಪಿಸುವುದು ಶ್ಲಾಘನೀಯ ಎಂದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮಾನವ ಹಕ್ಕು ಜನ ಸೇವಾ ಸಮಿತಿ ರಾಜ್ಯ ಅಧ್ಯಕ್ಷ ಗಣೇಶ್ ಗೌಡ ನಮ್ಮ ಸಂಘಟನೆ ಯಾವುದೇ ಜಾತಿ ಬೇಧವಿಲ್ಲದೆ ಸರ್ವ ಸಮುದಾಯವು ನಮ್ಮ ಬಂದು. ಸಂವಿಧಾನದ ಶಿಲ್ಪಿ ಡಾ ಅಂಬೇಡ್ಕರ್ ರವರ ರಚಿಸಿರುವ ಸಮಾನತರ ಹಕ್ಕು. ದುರುಪಯೋಗ ವಿರೋಧಿಸುವ ಹಕ್ಕು .ಧರ್ಮ ಪಾಲಿಸುವ ಹಕ್ಕು ಶಿಕ್ಷಣದ ಹಕ್ಕುಗಳನ್ನು ಪಾಲಿಸುತ್ತಾ ಸರ್ಕಾರದಲ್ಲಿ ಬರುವ ಸವಲತ್ತುಗಳಿಂದ ವಂಚಿತರಾಗಿರುವ ವಂಚಿತರಿಗೆ ಕಲ್ಪಿಸುವುದೇ ನಮ್ಮ ಸಂಘಟನೆಯ ಕಾಯಕ ಎಂದು ಸಂಘಟನೆಯ ಬಗ್ಗೆ ತಿಳಿಸಿದರು.

ಕೊರೋನಾ ಸಂದರ್ಭದಲ್ಲಿ ಸೇವೆಸಲ್ಲಿಸಿದ ಮಾಕವಳ್ಳಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಕೀಯ ಸಿಬ್ಬಂದಿಗಳಾದ ಸುಂದರಮ್ಮ. ಕುಮಾರ್. ಶರತ್. ಆಶಾ ಕಾರ್ಯಕರ್ತರಾದ ಲೀಲಾವತಿ ಚೌಡೇನಹಳ್ಳಿ. ಲಕ್ಷ್ಮಮ್ಮ ಚಿಕ್ಕಳಲೆ, ರೂಪ ಚೌಡೇನಹಳ್ಳಿ. ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಬಿ ಎಲ್ ದೇವರಾಜ್. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಚ್ ಟಿ ಮಂಜುನಾಥ್ .ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮದಾಸ್. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಎಂ ಬಿ ಹರೀಶ್. ಮಂಡ್ಯ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಾದಾಪುರ ಡಾ. ರಾಮಕೃಷ್ಣೇಗೌಡ. ತಾಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮತ್ತು ಪುರಸಭಾ ಸದಸ್ಯ ಸಂತೋಷ್ ಕುಮಾರ್. ಕಿಕ್ಕೇರಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಜಗದೀಶ್. ಕರ್ನಾಟಕ ರಕ್ಷಣಾ ಸೇನಾ ತಾಲೂಕು ಅಧ್ಯಕ್ಷ ಪ್ರಶಾಂತ್ .ಕರ್ನಾಟಕ ಮಾನವ ಹಕ್ಕು ಜನ ಸೇವಾ ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಕೃಷ್ಣಾಪುರ. ಜಿಲ್ಲಾ ಕಾರ್ಯದರ್ಶಿ ಪುನೀತ್. ಕಾನೂನು ಸಲಹೆಗಾರ ಗೋಪಾಲ್. ಸದಸ್ಯರುಗಳಾದ ಶಂಕರ್ ಚೌಡೇನಹಳ್ಳಿ. ಚೇತನ್. ಮೋಹನ್. ಕೀರ್ತಿ ಸೇರಿದಂತೆ ಉಪಸ್ಥಿತರಿದ್ದರು.

error: