ಕಿಕ್ಕೇರಿ: ಬಿ.ಎಂ.ಕಿರಣ್ ರವರ ಅಭಿಮಾನಿ ಬಳಗದ ವತಿಯಿಂದ ಬಸ್ ನಿಲ್ದಾಣ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಕಿಕ್ಕೇರಿ ಸಮೀಪದ ಕೃಷ್ಣಾಪುರ ಗ್ರಾಮದಲ್ಲಿ ನೆಡೆಯಿತು
ಕೃಷ್ಣರಾಜಪೇಟೆ ತಾಲ್ಲೂಕಿನ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ನ್ ಸಂಸ್ಥಾಪ ಹಾಗೂ ಜೆ.ಡಿ.ಎಸ್ ಪಕ್ಷದ ಪ್ರಭಾವಿ ನಾಯಕರಾದ ಬಿ.ಎಂ ಕಿರಣ್ ರವರ ಸಹಕಾರದೊಂದಿಗೆ ಕಿರಣ್ ಅಭಿಮಾನಿಗಳೆಲ್ಲಾ ಒಗ್ಗೂಡಿ ಸಾರ್ವಜನಿಕರ ಸ್ಥಳವಾದ ಕೃಷ್ಣಾಪುರ ಬಸ್ ನಿಲ್ದಾಣವನ್ನು ಸ್ಚಚ್ಚಗೊಳ್ಳಿಸಿ ಬಣ್ಣ ಬಳಿಯುವ ಮೂಲಕ ಮೆರಗು ನೀಡಲಾಯಿತು..
ನಂತರ ಕೃಷ್ಣಾಪುರ ಗ್ರಾಮದ ಮುಖಂಡರಾದ ಹರೀಶ್ ಮಾತನಾಡಿ ನಮ್ಮ ಬಸ್ ನಿಲ್ದಾಣ ತುಂಬಾ ದಿನಗಳಿಂದ ಸ್ವಚ್ಛತೆ ಇಲ್ಲದೆ ಗಿಡಗಳು ಬೆಳೆದುಕೊಂಡು ಗಬ್ಬೆದ್ದು ನಾರುತ್ತಿತ್ತು ಕಿರಣ್ ರವರ ಈ ಕಾರ್ಯದಿಂದ ಬಸ್ ನಿಲ್ದಾಣಕ್ಕೆ ಮೆರಗು ಬಂದAತಾಗಿದೆ ಯಾವುದೇ ರಾಜಕೀಯವಾಗಿ ಅಧಿಕಾರ ಇಲ್ಲದೆ ಬೆಂಗಳೂರಿನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ರಾಗಿ ಇವರು ಬಿ.ಎಂ ಕಿರಣ್ ರವರು ತಾಲ್ಲೂಕಿನಾದ್ಯಂತ ಅದೇಷ್ಟೂ ಜನರಿಗೆ ಆಸರೆಯಾಗಿದ್ದಾರೆ ಸಾಕಷ್ಟು ಅಭಿಮಾನಿ ಪಡೆಗಳನ್ನು ಹೊಂದಿದ್ದಾರೆ ಇಂಥಹ ಮನಸ್ಸುಳ್ಳವ ವ್ಯಕ್ತಿಗಳು ರಾಜಕೀಯ ಪ್ರವೇಶಿಸಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವ ಮಾಡಲು ಸಾರ್ವಜನಿಕರು ಅನುವು ಮಾಡಿಕೊಡಬೇಕೆಂದು ತಿಳಿಸಿದ್ರು..
ಈ ಸಂದರ್ಭದಲ್ಲಿ ಬಿ.ಎಂ ಕಿರಣ್ ಅಭಿಮಾನಿಗಳಾದ ನಟರಾಜ್, ಲೋಕೇಶ್, ರಾಜೇಶ್, ಪ್ರವೀಣ್,ಅನಿಲ್, ಶಿವಣ್ಣ, ಗಣೇಶ್, ಸಂದೀಪ್, ಸುದೀಪ್, ನಿತಿನ್, ಪ್ರತಾಪ್, ಮಹೇಶ್, ಸೇರಿದಂತೆ ಉಪಸ್ಥಿತರಿದ್ದರು
ವರದಿ:ಶಂಭು ಕಿಕ್ಕೇರಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ