April 20, 2024

Bhavana Tv

Its Your Channel

ಬಿ.ರಾಜಶೇಖರ್ ಹಾಗೂ ತಾಲ್ಲೂಕು ಪಂಚಾಯತಿ ಮಾಜಿಅಧ್ಯಕ್ಷೆ ವಿಜಯಲಕ್ಷ್ಮಿ ಅವರಿಂದ ಉಚಿತ ತರಕಾರಿ ವಿತರಣೆ.

ಬಿ.ರಾಜಶೇಖರ್ ಹಾಗೂ ತಾಲ್ಲೂಕು ಪಂಚಾಯತಿ ಮಾಜಿಅಧ್ಯಕ್ಷೆ ವಿಜಯಲಕ್ಷ್ಮಿ ಅವರು ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಠದಲ್ಲಿರುವ ಬಡಜನರು ಹಾಗೂ ಕೃಷಿಕೂಲಿ ಕಾರ್ಮಿಕರಿಗೆ ಉಚಿತವಾಗಿ ತರಕಾರಿಗಳನ್ನು ವಿತರಿಸಿದರು ….

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನಸಾಮಾನ್ಯರು ಭಾರೀ ಸಂಕಷ್ಠದಲ್ಲಿದ್ದಾರೆ…ಕೆಲಸ ಕಾರ್ಯವಿಲ್ಲದೇ ಮನೆಯಲ್ಲಿಯೇ ಹೌಸ್ ಲಾಕ್ ಆಗಿರುವ ಬಡಜನರು ಹಾಗೂ ಮಹಿಳೆಯರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಲು ತೀರ್ಮಾನಿಸಿ ಉಚಿತವಾಗಿ ತರಕಾರಿಗಳನ್ನು ವಿತರಿಸುತ್ತಿದ್ದೇವೆ…ಸಂಕಷ್ಠದ ಸಮಯದಲ್ಲಿ ಉಳ್ಳವರು ಬಡಜನರ ಸೇವೆ ಮಾಡಲು ಮುಂದಾಗಬೇಕು. ನೊಂದ ಜನರಿಗೆ ಕೈಲಾದ ಸಹಾಯ ಮಾಡಬೇಕು ಎಂದು ವಿಜಯಲಕ್ಷ್ಮಿರಾಜಶೇಖರ್ ಮನವಿ ಮಾಡಿದರು…

ತರಕಾರಿಗಳ ವಿತರಣೆ ಸಮಾರಂಭದಲ್ಲಿ ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆದಿಹಳ್ಳಿ ಮೀನಾಕ್ಷಿ, ಬೇಕರಿ ಉಧ್ಯಮಿ ಹೊಸಹೊಳಲು ಶೇಖರ್, ಕೃಷ್ಣರಾಜ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಬಿ.ಲೋಕೇಶ್, ಸಿಂದಘಟ್ಟನಾಗೇಶ್ ಮತ್ತಿತರರು ಉಪಸ್ಥಿತರಿದ್ದರು…

ವರದಿ. ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ…

error: