March 21, 2023

Bhavana Tv

Its Your Channel

ಕೋವಿಡ್-೧೯ ಟೆಸ್ಟ್ ಮಾಡದಂತೆ ಎಂಎಲ್‌ಸಿ ಯಿಂದ ಗಲಾಟೆ

ಮಂಡ್ಯ: ಕೋವಿಡ್-೧೯ ಟೆಸ್ಟ್ ನಿಲ್ಲಿಸುವಂತೆ ಜೆಡಿಎಸ್ ಎಂಎಲ್‌ಸಿ ಕೆ.ಟಿ ಶ್ರೀಕಂಠೇಗೌಡ ಹಾಗೂ ಅವರ ಪುತ್ರ ಗಲಾಟೆ ನಡೆಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರ ಕೋವಿಡ್ ೧೯ ಟೆಸ್ಟ್ ಏರ್ಪಡಿಸಲಾಗಿತ್ತು. ಈ ವೇಳೆ ಜನ ನಿಬಿಡ ಪ್ರದೇಶವಾದ ಇಲ್ಲಿ ಕೊವಿಡ್ ಟೆಸ್ಟ್ ಮಾಡಬೇಡಿ ಎಂದು ತನ್ನ ಸಂಗಡಿಗರನ್ನು ಕರೆದುಕೊಂಡು ಬಂದು ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಗಲಾಟೆ ನಡೆಸಿದ್ದಾರೆ. ಅಲ್ಲದೇ ಇಲ್ಲಿ ಹತ್ತಿರದಲ್ಲಿ ತಮ್ಮ ಮನೆಯೂ ಇದೆ, ಇಲ್ಲಿ ಕರೊನಾ ಸೋಂಕು ಹರಡಲು ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಶ್ರೀಕಂಠೇಗೌಡರ ಪುತ್ರ ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶ್ರೀಕಂಠೇಗೌಡ ಜನರನ್ನು ಎತ್ತಿ ಕಟ್ಟಿ ಗಾಲಾಅಟೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಗಲಾಟೆ ಪ್ರಕರಣ ಸಂಬAಧ ಶ್ರೀಕಂಠೇಗೌಡ ಹಾಗೂ ಪುತ್ರನ ವಿರುದ್ಧ ಎಫ್ ಐಆರ್ ದಾಖಲಾಗಿದೆ.

About Post Author

error: