April 19, 2024

Bhavana Tv

Its Your Channel

ಜಗದ್ಗುರುಗಳಾದ ಶ್ರೀ ಆದಿಶಂಕರಾಚಾರ್ಯ ಹಾಗೂ ಭಗೀರಥ ಮಹರ್ಷಿಗಳ ಜಯಂತ್ಯೋತ್ಸವ

ಕೃಷ್ಣರಾಜಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಜಗದ್ಗುರುಗಳಾದ ಶ್ರೀ ಆದಿಶಂಕರಾಚಾರ್ಯ ಹಾಗೂ ಭಗೀರಥ ಮಹರ್ಷಿಗಳ ಜಯಂತ್ಯೋತ್ಸವವನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು …

ತಹಶೀಲ್ದಾರ್ ಎಂ.ಶಿವಮೂರ್ತಿ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ದಯಾನಂದ, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಡಾ.ಮನುಕುಮಾರ್ ಮತ್ತು ತಾಲ್ಲೂಕು ಬಿಸಿಎಂ ಅಧಿಕಾರಿ ವೆಂಕಟೇಶ್ ಇಬ್ಬರೂ ಮಹನೀಯರ ಭಾವಚಿತ್ರಗಳಿಗೆ ಪೂಜೆಮಾಡಿ ಪುಷ್ಪನಮನ ಸಲ್ಲಿಸಿದರು…

ಸನಾತನ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ದುಡಿದು ದೇಶದಾದ್ಯಂತ ಸಂಚಾರ ನಡೆಸಿ ಧಾರ್ಮಿಕ ಜಾಗೃತಿ ಮೂಡಿಸಿ ಹಿಂದೂ ಧರ್ಮದ ಶ್ರೇಷ್ಠತೆ ಹಾಗೂ ವೈಭವವನ್ನು ನಾಡಿನಾದ್ಯಂತ ಪಸರಿಸಿದ ಗುರು ಶಂಕರಾಚಾರ್ಯರು ಭಗವಂತನ ಸಾಕ್ಷಾತ್ಕಾರಕ್ಕೆ ಆಡಂಬರದ ಪೂಜೆಪುರಸ್ಕಾರ ಬೇಕಾಗಿಲ್ಲ. ನಿಜವಾದ ಭಕ್ತಿ ಹಾಗೂ ನಿಷ್ಕಲ್ಮಶವಾದ ಮನಸ್ಸಿನಿಂದ ಪ್ರಾರ್ಥಿಸಿದರೆ ದೇವರ ಅನುಗ್ರಹವಾಗುತ್ತದೆ ಎಂದು ಸಾರಿ ಹೇಳಿದರಲ್ಲದೇ ದೇಶದ ನಾಲ್ಕು ದಿಕ್ಕುಗಳಲ್ಲಿಯೂ ಶಂಕರ ಮಠವನ್ನು ಸ್ಥಾಪಿಸಿದರು ಎಂದು ಸ್ಮರಿಸಿದ ಅವರು ತಮ್ಮ ಸತತವಾದ ಪ್ರಯತ್ನದಿಂದ ಗಂಗೆಯನ್ನು ದೇವಲೋಕದಿಂದ ಧರೆಗೆ ತಂದ ಭಗೀರಥ ಮಹರ್ಷಿಗಳ ಜೀವನದ ಆದರ್ಶಗಳು ಹಾಗೂ ಸಾಧಿಸುವ ಛಲವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಶಿವಮೂರ್ತಿ ಹೇಳಿದರು…

ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಮತ್ತು ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ ಇಬ್ಬರೂ ಮಹನೀಯರನ್ನು ಕುರಿತು ಮಾತನಾಡಿದರು…
ಉಪತಹಶೀಲ್ದಾರ್ ಲಕ್ಷ್ಮೀಕಾಂತ್ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಥಮದರ್ಜೆ ಸಹಾಯಕರಾದ ಹಿರಿಯಣ್ಣ ಸ್ವಾಗತಿಸಿದರು, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್ ವಂದಿಸಿದರು. ರಾಜಶ್ವನಿರೀಕ್ಷಕಿ ಚಂದ್ರಕಲಾ ಪ್ರಾರ್ಥಿಸಿದರು…

error: