ಮoಡ್ಯ:– ಕೋವಿಡ್ ೧೯ ಪರಿಹಾರ ನಿಧಿಗೆ ಶಿವರಾಮೇಗೌಡರು ನೀಡಿದ ೨ಲಕ್ಷರೂಗಳ ಸಹಾಯ ಧನದ ಚೆಕ್ಕನ್ನು ಸ್ವೀಕರಿಸಿದ ಪಾಂಡವಪುರ ಉಪವಿಭಾಗಾಧಿಕಾರಿ ವಿ. ಆರ್.ಶೈಲಜಾ ಸಮಾಜದಲ್ಲಿ ಉಳ್ಳವರು ದಾನ ಧರ್ಮ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು…ಉದ್ಯಮಿಗಳಾದ ಶಿವರಾಮೇಗೌಡ ಸಾಂಸ್ಥಿಕ ಹೋಂ ಕ್ವಾರಂಟೈನ್ ನಲ್ಲಿರುವ ೧೨೦೦ಜನರಿಗೆ ಒಂದು ದಿನ ಚಿಕನ್ ಬಿರಿಯಾನಿ ಊಟವನ್ನು ಕೊಡಿಸಿ ಹೃದಯವೈಶಾಲ್ಯತೆಯನ್ನು ಮೆರೆದಿದ್ದರು. ಪ್ರಸ್ತುತ ಕೊರೋನಾ ಸಂಕಷ್ಠವನ್ನು ಅರಿತು ೨ಲಕ್ಷರೂ ಧನ ಸಹಾಯ ಮಾಡಿ ಸಮಾಜದಲ್ಲಿನ ಇತರರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸಿದರು…
ನನ್ನ ತಂದೆಯ ಸೇವಾ ಕಾರ್ಯಗಳ ಬಗ್ಗೆ ನನಗೆ ಹೆಮ್ಮೆಯಿದೆ; ಯಶಸ್ವಿನಿ.
ಶಿವರಾಮೇಗೌಡ ಅವರು ಎರಡು ಲಕ್ಷರೂ ಹಣವನ್ನು ಕೋವಿಡ್ ನಿಧಿಗೆ ಪರಿಹಾರ ನೀಡಿದ್ದು ಹಾಗೂ ಮುಂಬೈ ಕನ್ನಡಿಗ ಬಂಧುಗಳಿಗೆ ಊಟ ಹಾಕಿಸಿದ್ದಕ್ಕೆ ನನಗೆ ನನ್ನ ತಂದೆಯವರ ಬಗ್ಗೆ ಹೆಮ್ಮೆಯಿದೆ..ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯವನ್ನು ನನ್ನ ತಂದೆ ಮಾಡಲಿದ್ದಾರೆ..ನಾನು ಶಿವರಾಮೇಗೌಡರ ಮಗಳು ಎಂದು ಹೇಳಲು ಹೆಮ್ಮೆಯೆನಿಸುತ್ತದೆ ಎಂದು ಅಭಿಮಾನದಿಂದ ಹೇಳಿದರು…
ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಕೆ.ಶಿವರಾಮೇಗೌಡ, ದಾನಿಗಳಾದ ಶಿವರಾಮೇಗೌಡರ ಪತ್ನಿ ಶಾಂತ, ಪುತ್ರಿ ಯಶಸ್ವಿನಿ,ಚಿಕ್ಕೋನಹಳ್ಳಿ ಜಾಣೇಗೌಡರು, ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್ ಮತ್ತಿತರರು ಉಪಸ್ಥಿತರಿದ್ದರು…
ವರದಿ:- ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ …
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ