April 27, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನ ರಾಜಘಟ್ಟ ಗ್ರಾಮ ಸೀಲ್ ಡೌನ್‌ನಿಂದ ಮುಕ್ತ

ಕೆ.ಆರ್. ಪೇಟೆ : ಕೊರೋನಾ ಪ್ರಥಮ ಪ್ರಕರಣ ಸಂಖ್ಯೆ ೫೬೯ ಕೃಷ್ಣರಾಜಪೇಟೆ ತಾಲ್ಲೂಕಿನ ರಾಜಘಟ್ಟ ಗ್ರಾಮದಲ್ಲಿ ಪತ್ತೆಯಾಗಿ ಸೀಲ್ ಡೌನ್ ಆಗಿ ಕಾಂಟಿನೆAಟಲ್ ಝೋನ್ ಆಗಿದ್ದ ಗ್ರಾಮವನ್ನು ಇಂದು ಕಾಂಟಿನೆAಟಲ್ ಝೋನ್ ನಿಂದ ತಹಶೀಲ್ದಾರ್ ಎಂ. ಶಿವಮೂರ್ತಿ ಮುಕ್ತಗೊಳಿಸಿದರು.

ಕಳೆದ ಮೇ ೧ರಂದು ಗ್ರಾಮದ ಮಹಿಳೆಗೆ ಕೊರೋನಾ ಪಾಸಿಟಿವ್ ಸೋಂಕು ಪತ್ತೆಯಾಗಿದ್ದನ್ನು ಹೊರತುಪಡಿಸಿದರೆ ಇದುವರೆಗೆ ಯಾರೊಬ್ಬರಿಗೂ ಕೊರೋನಾ ಸೋಂಕು ಪತ್ತೆಯಾಗಿಲ್ಲ..ಕೊರೋನಾ ವೈರಾಣುಗಳು ಯಾರೊಬ್ಬರಿಗೂ ಹರಡಿಲ್ಲ.ಗ್ರಾಮಸ್ಥರು ಕಟ್ಟುನಿಟ್ಟಾಗಿ ಆರೋಗ್ಯ ಮುಂಜಾಗರೂಕತಾ ಕ್ರಮಗಳನ್ನು ಪಾಲಿಸಿ ಕೊರೋನಾ ಯುದ್ಧದಲ್ಲಿ ಗೆದ್ದಿದ್ದಾರೆ. ಆದ್ದರಿಂದ ತಾಲ್ಲೂಕು ಮತ್ತು ಜಿಲ್ಲಾಡಳಿತದ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ಕೈಮುಗಿದಾಗ ಗ್ರಾಮಸ್ಥರು ಭಾವಪರವಶರಾಗಿ ಕೈತಟ್ಟಿ ಚಪ್ಪಾಳೆಯನ್ನು ಹಾಕಿ ಕೃತಜ್ಞತೆಯನ್ನು ಅರ್ಪಿಸಿದರು.

error: