ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಪುರಸಭೆಯಲ್ಲಿ ಪರಿಸರ ವಿಭಾಗದ ಎಂಜಿನಿಯರ್ ಆಗಿ ಕಳೆದ ೫ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರಕ್ಷಿತ್ ಗೌಡ ಅವರು ಭದ್ರಾವತಿ ನಗರಸಭೆಗೆ ವರ್ಗಾವಣೆಗೊಂಡ ಹಿನ್ನೆಯಲ್ಲಿ ರಕ್ಷಿತ್ ಅವರಿಗೆ ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರೆ ಪುರಸಭೆಗೆ ನೂತನವಾಗಿ ಆಗಮಿಸಿ ಪರಿಸರ ಎಂಜಿನಿಯರ್ ಆಗಿ ಅಧಿಕಾರ ಸ್ವೀಕರಿಸಿದ ರುದ್ರೇಗೌಡ ಅವರನ್ನು ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಹೂಮಾಲೆ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು.ಮಾತುಕತೆಯ ತೊಂದರೆಯಿದ್ದು ವಿಶೇಷಚೇತನ ನೌಕರರಾಗಿದ್ದರೂ ಅಂಗವಿಕಲತೆಯನ್ನು ಮೆಟ್ಟಿನಿಂತು ಜನಸಾಮಾನ್ಯರ ಕೈಸನ್ನೆಯ ಭಾಷೆಯನ್ನು ಅರ್ಥ ಮಾಡಿಕೊಂಡು ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸಿದ ರಕ್ಷಿತ್ ಗೌಡ ತಮ್ಮ ಸಾರ್ಥಕ ಸೇವೆಯಿಂದ ಪಟ್ಟಣದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದರು.ಸರ್ಕಾರದ ಕೆಲಸವನ್ನು ದೇವರ ಕೆಲಸವೆಂದು ತಿಳಿದು ಕರ್ತವ್ಯ ನಿರ್ವಹಿಸಿದ ರಕ್ಷಿತ್ ಭದ್ರಾವತಿ ನಗರದಲ್ಲಿಯೂ ಉತ್ತಮವಾದ ಸೇವೆಸಲ್ಲಿಸಿ ಎಲ್ಲರ ಮೆಚ್ಚುಗೆಗಳಿಸಲಿ ಎಂದು ಶುಭಹಾರೈಸಿ ಬೀಳ್ಕೊಟ್ಟರು…
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ತಾಲೂಕು ವಿತರಕರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಪುರಸಭೆ ಮಾಜಿಸದಸ್ಯ ಡಾ.ಕೆ.ಆರ್.ನೀಲಕಂಠ, ಕಛೇರಿಯ ವ್ಯವಸ್ಥಾಪಕರಾದ ಸೋಮಶೇಖರ್, ಆರೋಗ್ಯ ಪರಿವೀಕ್ಷಕ ಅಶೋಕ್, ರಾಜಶ್ವನಿರೀಕ್ಷಕ ಹೆಚ್.ಪಿ.ನಾಗರಾಜು, ಮಂಜುಳಾ, ಮಂಟೇಮoಜು, ಕೆ.ಎನ್. ಶಾರದಾ, ರತ್ನ, ಸುಕನ್ಯಾ, ಶ್ರೀನಾಥ್, ರಷ್ಮಿ, ಪುಟ್ಟ, ಮನು, ಮುತ್ತಯ್ಯ, ಶಾರದಾ ಹಾಗೂ ಪುರಸಭೆಯ ಪೌರಕಾರ್ಮಿಕರು ಸಭೆಯಲ್ಲಿ ಭಾಗವಹಿಸಿದ್ದರು…
ವರದಿ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ . ಮಂಡ್ಯ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ