April 28, 2024

Bhavana Tv

Its Your Channel

ಭರ್ಭರವಾಗಿ ತುಂಡು ತುಂಡಾಗಿ ಕತ್ತರಿಸಿ ಮಹಿಳೆ ಹತ್ಯೆ

ಮಂಡ್ಯ: ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನಲ್ಲಿ ತುಂಡು ತುಂಡಾಗಿ ಮಹಿಳೆಯ ದೇಹ ಮತ್ತು ಕೈಕಾಲುಗಳನ್ನು ಕತ್ತರಿಸಿ ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿ ಬಳಿ ಹೇಮಾವತಿ ನದಿ ಕಾಲುವೆಗೆ ಎಸೆದು ಪರಾರಿಯಾಗಿರುವ ದುಷ್ಕರ್ಮಿಗಳು. ಹೇಮಗಿರಿ ಬಳಿ ತ್ರಿಶೂಲ್ ಜಲ ವಿದ್ಯುದಾಗಾರದ ಗೇಟಿಗೆ ಸಿಕ್ಕಿಕೊಂಡ ಮಹಿಳೆಯ ದೇಹದ ಕತ್ತರಿಸಿದ ಭಾಗಗಳು, ತ್ರಿಶೂಲ್ ಪವರ್ ಹೌಸ್ ಕಾರ್ಮಿಕರಿಂದ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದರು. ನಾಗಮಂಗಲ ಡಿವೈಎಸ್ ಪಿ, ಕೆ.ಆರ್.ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

೨೦ ವರ್ಷದಿಂದ-೨೫ ವರ್ಷದೊಳಗಿನ ಪ್ರಾಯದ ಮಹಿಳೆಯ ದೇಹವನ್ನು ರುಂಡ ಮುಂಡ ಬೇರೆ ಬೇರೆ ಮಾಡಿ ಕೈಕಾಲುಗಳನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಹೇಮಾವತಿ ನದಿ ಕಾಲುವೆಗೆ ಮೃತ ಮಹಿಳೆಯ ದೇಹದ ಭಾಗಗಳನ್ನು ಎಸೆದು ಪರಾರಿಯಾಗಿರುವ ದುಷ್ಕರ್ಮಿಗಳು… ಮೂಗಿನಲ್ಲಿ ಕೆಂಪು ಹರಳಿನ ಮೂಗುತಿ ಧರಿಸಿರುವ ಮಹಿಳೆಯ ಮೃತ ದೇಹದ ಮುಂಗೈ ಮೇಲೆ ಮೀನಿನ ಹಚ್ಚೆಯ ಗುರುತಿದೆ…ಬರ್ಭರವಾಗಿ ಮಹಿಳೆಯ ಮೃತ ದೇಹವನ್ನು ಕತ್ತರಿಸಿ ಕೊಲೆ ಮಾಡಿರುವ ದುಷ್ಕರ್ಮಿಗಳ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ..ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಮಹಿಳೆಯ ದೇಹದ ಭಾಗಗಳ ರವಾನೆ…
ಮೃತ ಮಹಿಳೆಯ ಬಗ್ಗೆ ಮಾಹಿತಿ ಗೊತ್ತಿದ್ದವರು ಗ್ರಾಮಾಂತರ ಪೋಲಿಸ್ ಠಾಣೆಯ ದೂರವಾಣಿ ೦೮೨೩೦-೨೬೨೪೪೦ ಅಥವಾ ಮೊಬೈಲ್ ಫೋನ್ ೯೪೮೦೮೦೪೮೬೦ ಅನ್ನು ಸಂಪರ್ಕಿಸಬೇಕು ಎಂದು ಗ್ರಾಮಾಂತರ ಪೋಲಿಸರು ಮನವಿ ಮಾಡಿದ್ದಾರೆ…

ವರದಿ ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: