May 18, 2024

Bhavana Tv

Its Your Channel

ಇಂದು ಮುಂಜಾನೆ ಕೆರೆಕೋಡಿಯ ಬಳಿ ಟಾಟಾ ಸುಮೋ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಯ ಕೆಳಕ್ಕೆ ಮೊಗಚಿ ಬಿದ್ದಿದೆ.

ಮಂಡ್ಯ: ಬಿ.ಎಸ್.ಎನ್.ಎಲ್ ಕೇಬಲ್ ದುರಸ್ಥಿಯ ಟಾಟಾ ಸುಮೋ ಕಾರು ಇಂದು ಮುಂಜಾನೆ ಕೆ.ಆರ್.ಪೇಟೆ ಪಟ್ಟಣದ ದೇವೀರಮ್ಮಣ್ಣಿ ಕೆರೆ ಕೋಡಿಯ ತಿರುವಿನಲ್ಲಿ ಆಯತಪ್ಪಿ ಮಗುಚಿಬಿದ್ದಿದ್ದು ಕಾರಿನಲ್ಲಿದ್ದ ಚಾಲಕ ಸೇರಿದಂತೆ ಮೂವರಿಗೆ ಸಣ್ಣ ಪುಟ್ಟ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ …

ನಾಗಮಂಗಲ ಕಡೆಯಿಂದ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸುತ್ತಿದ್ದ ಟಾಟಾ ಸುಮೋ ಕಾರು ಇಂದು ಮುಂಜಾನೆ ೫ಗಂಟೆಯ ಸಮಯದಲ್ಲಿ ಕೆರೆಕೋಡಿಯ ಬಳಿ ತಿರುವು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಯ ಏರಿಯಿಂದ ಕೆಳಕ್ಕೆ ಮೊಗಚಿ ಬಿದ್ದಿದೆ..

ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಾದ ರಾಮಕೃಷ್ಣ, ಸುರೇಶ್ ಮತ್ತು ಮೋಹನ್ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣ ಪೋಲಿಸ್ ಠಾಣೆಯಲ್ಲಿ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ. ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: