May 19, 2024

Bhavana Tv

Its Your Channel

ಕೆ.ಆರ್.ಪೇಟೆ ಸಿಡಿಪಿಓ ಆಗಿ ಅರುಣಕುಮಾರ್ ಅಧಿಕಾರ ಸ್ವೀಕಾರ

ಕೃಷ್ಣರಾಜಪೇಟೆ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೂತನ ಅಧಿಕಾರಿಗಳಾಗಿ ಅರುಣ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು..

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಸಿಡಿಪಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್ ಕುಮಾರ್ ದೇವಕುಮಾರ್ ಅವರ ವಯೋನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಪ್ರಭಾರ ಸಿಡಿಪಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ತಾಲ್ಲೂಕು ಸಿಡಿಪಿಓ ಕುಮಾರಸ್ವಾಮಿ ಅವರಿಂದ ಅಧಿಕಾರ ಸ್ವೀಕರಿಸಿದರು.

ಕುಮಾರಸ್ವಾಮಿ ಅವರನ್ನು ಶಾಲುಹೊದಿಸಿ ಮಣಿಮಾಲೆ ಹಾಕಿ ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರೆ ನೂತನ ಸಿಡಿಪಿಓ ಅರುಣ್ ಕುಮಾರ್ ಅವರನ್ನು ಹೃದಯಸ್ಪರ್ಶಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಎಸಿಡಿಪಿಓ ಪದ್ಮಾಜಗಧೀಶ್, ಕಛೇರಿಯ ವ್ಯವಸ್ಥಾಪಕಿ ಯಶೋದಮ್ಮ, ಮೇಲ್ವಿಚಾರಕರಾದ ದಿಲ್ ಶಾದ್ ಬಿ.ನಧಾಫ್, ಶಾಂತವ್ವ, ಮಂಜುಳಾ, ಉಪನ್ಯಾಸಕರಾದ ಕತ್ತರಘಟ್ಟ ವಾಸು ಮತ್ತಿತರರು ಉಪಸ್ಥಿತರಿದ್ದರು.

ವರದಿ ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: