April 26, 2024

Bhavana Tv

Its Your Channel

ಈಜಲು ಹೋಗಿ ಜಲಸಮಾಧಿ, ಮೈಸೂರಿನ ಮೂವರು ಯುವಕರ ಮೃತ ದೇಹ ಪತ್ತೆ

ವರದಿ:ಶಂಭು ಕಿಕ್ಕೇರಿ
ಕೆ.ಆರ್.ಪೇಟೆ ತಾಲ್ಲೂಕಿನ ಚಂದಗೋನಹಳ್ಳಮ್ಮ ದೇವಾಲಯದ ಬಳಿ ಮಂದಗೆರೆ ಎಡದಂಡ ನಾಲೆಯಲ್ಲಿ ಈಜಲು ಹೋಗಿ ಜಲಸಮಾಧಿಯಾಗಿದ್ದ ಮೈಸೂರಿನ ಮೂವರು ಯುವಕರ ಮೃತ ದೇಹಗಳ ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ

ಕೆ.ಆರ್.ಪೇಟೆ ತಾಲ್ಲೂಕಿನ ಚಂದಗೋನಹಳ್ಳಮ್ಮ ದೇವಾಲಯದ ಬಳಿ ಮಂದಗೆರೆ ಎಡದಂಡ ನಾಲೆಯಲ್ಲಿ ನಿನ್ನೆ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿದ್ದ ಮೈಸೂರಿನ ಮೂವರು ಯುವಕರ ಮೃತ ದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಹೇಮಾವತಿ ನದಿಯ ಮಂದಗೆರೆ ಎಡದಂಡ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ನಿನ್ನೆ ತಡರಾತ್ರಿ ಕತ್ತಲಾದ್ದರಿಂದ ಶವಗಳ ಶೋಧನಾ ಕಾರ್ಯವನ್ನು ನಿಲ್ಲಿಸಿ ನಾಲೆಯಲ್ಲಿ ನೀರು ಹರಿಯುವುದನ್ನು ನಿಲ್ಲಿಸಲಾಗಿತ್ತು..

ಇಂದು ಬೆಳಿಗ್ಗೆ ಅಗ್ನಿಶಾಮಕ ಠಾಣಾಧಿಕಾರಿ ಶಿವಣ್ಣ ಮತ್ತು ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುರೇಶ್ ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂಧಿಗಳು ಮೃತ ದೇಹಗಳನ್ನು ಕಾಲುವೆಯಿಂದ ಹೊರತೆಗೆದು ಮೃತ ದೇಹಗಳ ಮರಣೋತ್ತರ ವರದಿ ಪಡೆಯಲು ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಮೂರೂ ಮೃತ ಯುವಕರ ಕುಟುಂಬದ ಸದಸ್ಯರ ಆಕ್ರಂದನವು ಮುಗಿಲು ಮುಟ್ಟಿತ್ತು

error: