May 21, 2024

Bhavana Tv

Its Your Channel

ಬೈಕ್ ಅಪಘಾತ, ಸಂಪೂರ್ಣ ಸುಟ್ಟು ಹೋದ ಬೈಕ್

ನಾಗಮಂಗಲ: ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಲ್ಲಿ ಬೈಕ್ ವೊಂದು ಆಯತಪ್ಪಿ ಬಿದ್ದ ಪರಿಣಾಮ ಬೆಂಕಿ ಹಚ್ಚಿಕೊಂಡು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಮಂಗಳವಾರ ಸಂಜೆ ೬:೩೦ರ ಸುಮಾರಿಗೆ ನಡೆದಿದೆ.
ಅಗ್ನಿ ಶಾಮಕ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಜೇಶ್ ನೇತೃತ್ವದಲ್ಲಿ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ವಾಹನದ ಸವಾರ ಪರಾರಿಯಾಗಿದ್ದು, ಆತ ಬೆಳ್ಳೂರು ಹೋಬಳಿ ಕಂಚನಹಳ್ಳಿ ಗ್ರಾಮದವನೆಂದು ತಿಳಿದುಬಂದಿದ್ದು. ಪಲ್ಸರ್ ೨೨೦ ಬೈಕ್ ಆಗಿದ್ದು ಸ್ಥಳಕ್ಕೆ ಪಟ್ಟಣ ಠಾಣೆ ಸಬ್ ಇನ್ಸ್ ಪೆಕ್ಟರ್ ರವಿಶಂಕರ್ ಭೇಟಿ ನೀಡಿ ಪರಿಶೀಲಿಸಿದರು.
ಆಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ವರದಿ: ದೇವಲಾಪುರ ಜಗದೀಶ ನಾಗಮಂಗಲ

error: