ನಾಗಮಂಗಲ:-ಈ ಕ್ಷೇತ್ರದ ಬಗ್ಗೆ ನಮ್ಮ ಜಾತ್ಯತೀತ ಜನತಾ ದಳದ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಎಚ್. ಡಿ. ಕುಮಾರಸ್ವಾಮಿ ರವರು ತಾಲೂಕಿನ ಪ್ರತಿ ಬೆಳವಣಿಗೆಯ ಚಲನವಲನವನ್ನು ಗಮನಿಸುತ್ತಿದ್ದಾರೆ ವರಿಷ್ಠರ ತೀರ್ಮಾನ ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುವಿನ ನಿರ್ಧಾರದಂತೆ ಈ ಕ್ಷೇತ್ರದಲ್ಲಿ ನಿರ್ಣಯವಾಗುತ್ತದೆ ಇಲ್ಲಿ ಪಕ್ಷಕ್ಕಿಂತ ಯಾವ ವ್ಯಕ್ತಿಯೂ ಕೂಡ ದೊಡ್ಡವರಲ್ಲ ವರಿಷ್ಟರ ತೀರ್ಮಾನವೇ ಅಂತಿಮವಾಗಿರುತ್ತದೆ ಹಾಗೂ ಈ ಬಾರಿ ಶಾಸಕ ಸ್ಥಾನಕ್ಕೆ ನಾನೇ ಸ್ಪರ್ಧಿಸುವುದು ಖಚಿತವಾಗಿದೆ ಈ ಮಾತು ನೂರಕ್ಕೆ ಸಾವಿರದಷ್ಟು ಸತ್ಯವಾದ ಮಾತು ಎಂದರು
ಜೆ.ಡಿ.ಎಸ್. ನ ಪ್ರಭಾವಿ ನಾಯಕ ಪಾಂಡುಪುರ ಶಾಸಕ ಪುಟ್ಟರಾಜು ರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಭೇಟಿ ಮಾಧ್ಯಮದವರ ಕೇಳಿದ ಪ್ರಶ್ನೆಗೆ ಮಾತನಾಡಿ ನೀವು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಸುರೇಶ್ ಗೌಡ ಈಗಾಗಲೇ ನಮ್ಮ ಸ್ನೇಹಿತರು ಹಾಗು ಶಾಸಕರಾದ ಪುಟ್ಟರಾಜು ರವರು ದೇವಾಲಯ ಉದ್ಘಾಟನೆ ಕಾರ್ಯಕ್ರಮ ಕುರಿತು ಕುರುಬ ಸಮುದಾಯದ ಮುಖಂಡರೊAದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿದ್ದೇನೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಈ ವಿಚಾರದಲ್ಲಿ ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದು ತಳುಕು ಹಾಕುವುದು ಎಷ್ಟು ಸರಿ ಎಂದ ಅವರು ನಾನು ಕೂಡ ದೇವೇಗೌಡ ಮತ್ತು ಕುಮಾರಸ್ವಾಮಿ ಜೊತೆಗೂಡಿ ಪಕ್ಷಕ್ಕೆ ಕಟ್ಟಾಳು ಆಗಿರುತ್ತೇನೆ. ಬೇರೆ ಕ್ಷೇತ್ರದಂತೆ ಈ ಕ್ಷೇತ್ರದಲ್ಲಿ ಬದಲಾವಣೆಗಳು ಆಗುವುದು ಕಷ್ಟಕರ ಮುಂದಿನ ಬಾರಿ 2023ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳದಿಂದ ನಾನೇ ಸ್ಪರ್ಧಿಸುವುದು ಖಚಿತವೆಂದರು
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ