April 29, 2024

Bhavana Tv

Its Your Channel

ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ನ್ಯಾಯಾಧೀಶ ಮಲ್ಲಿಕಾರ್ಜುನ ಪಾಟೀಲ್ ವಿರುದ್ಧ ಪ್ರತಿಭಟನೆ

ನಾಗಮಂಗಲ: ಗಣರಾಜ್ಯೋತ್ಸವ ದಿನದಂದು ಡಾ.ಅಂಬೇಡ್ಕರ್ ಭಾವಚಿತ್ರ ತೆರವು ಮಾಡಿಸಿ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನ ಸೇವೆಯಿಂದ ವಜಾ ಮಾಡುವಂತೆ ಆಗ್ರಹಿಸಿ ನಾಗಮಂಗಲದಲ್ಲಿ ದಲಿತ ಸಂಘಟನೆ ಮುಖಂಡರುಗಳು ಪ್ರತಿಭಟನೆ ನಡೆಸಿದರು.

ನಾಗಮಂಗಲ ಪಟ್ಟಣದ ಮುಖ್ಯ ರಸ್ತೆ ಯಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಟಿ ಮರಿಯಪ್ಪ ವೃತ್ತದಲ್ಲಿ ಮಲ್ಲಿಕಾರ್ಜುನ ಗೌಡ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ತಾಲ್ಲೂಕು ಆಡಳಿತ ಸೌಧದ ಅಂಬೇಡ್ಕರ್ ಪ್ರತಿಮೆ ಬಳಿ ನಿಂತು ನ್ಯಾಯಕ್ಕಾಗಿ ಆಗ್ರಹಿಸಿ ಸಂವಿಧಾನ ವಿರೋಧಿ ದಲಿತ ವಿರೋಧಿ ಎಂದು ನ್ಯಾಯಾದೀಶರ ವಿರುದ್ಧ ಘೋಷಣೆ ಕೂಗಿದರು.

ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಕ್ಯಾತನಹಳ್ಳಿ ಮಂಜು ಜಾತಿವಾದಿ ಮನುವಾದ ಮನಸ್ಥಿತಿ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ನ್ಯಾಯಾಂಗ ಸೇವೆಯಲ್ಲಿ ಮುಂದುವರೆಯಲು ನೈತಿಕತೆ ಇಲ್ಲ ಕೂಡಲೆ ಅವರನ್ನ ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ದಲಿತ ಮುಖಂಡ ಹುರುಳಿಗಂಗನಹಳ್ಳಿ ಮಹದೇವಣ್ಣ ಮಾತನಾಡಿ ಅಂಬೇಡ್ಕರ್ ಗೆ ಅಂಬೇಡ್ಕರ್ ಅವರೇ ಸಮಾನ ಅವರು ಮಾಡಿರುವ ಕಾನೂನಿನ ಭಿಕ್ಷೆಯಲ್ಲಿ ಹುದ್ದೆ ಪಡೆದು ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಾಗಮಂಗಲ ಸಂಚಾಲಕ ಮಂಜು ಕ್ಯಾತನಹಳ್ಳಿ, ಕಂಚಿನ ಕೋಟೆ ಮೂರ್ತಿ, ಶಿವರಾಮಯ್ಯ, ಬೆಟ್ಟದ ಮಲ್ಲೇನಹಳ್ಳಿ, ರಮೇಶ್ ತೋಳಲಿ, ಕೃಷ್ಣಮೂರ್ತಿ ಶೇಖರ್ ಸುಜಾತಾ ಮುಳುಕಟ್ಟೆ ಸಂತೋಷ್, ಅಶೋಕ್, ಹಾಜರಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: