ನಾಗಮಂಗಲ ಪ್ರೆಸ್ ಕ್ಲಬ್ನ ನೂತನ ಅಧ್ಯಕ್ಷರಾಗಿ ಎನ್ ಆರ್ ದೇವಾನಂದ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಗಮಂಗಲ ಪ್ರೆಸ್ ಕ್ಲಬ್ ಕಚೇರಿಯಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಗದ್ದೇಭೂವನಹಳ್ಳಿ ದೇವರಾಜು ಅವರಿಂದ ಎರಡನೆ ಅವಧಿಗೆ ಎನ್ ಆರ್ ದೇವಾನಂದ್ ಅಧ್ಯಕ್ಷರಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್ ವೆಂಕಟೇಶ್ ರವರು ನಿಕಟಪೂರ್ವ ಕಾರ್ಯದರ್ಶಿ ಎಂಕೆ ಉಮೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ದೇವಾನಂದ್ ಸಮಾನ ವಯಸ್ಕರು ಇಲ್ಲದಿದ್ದರೂ ಸಮಾನ ಮನಸ್ಕರು ಇದ್ದೇವೆ ಪ್ರೆಸ್ ಕ್ಲಬ್ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಲು ನಿಮ್ಮೆಲ್ಲರ ಸಹಕಾರ ಬೇಕು ಎಂದರು.
ನೂತನ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಪ್ರೆಸ್ ಕ್ಲಬ್ ಅಭಿವೃದ್ದಿಯೆ ನಮ್ಮ ಗುರಿಯಾಗಿದೆ ಎಂದರು.
ಇದೆ ವೇಳೆ ಕಾರ್ಯಕಾರಿ ಸಮಿತಿಗೆ ಗದ್ದೇಭೂವನಹಳ್ಳಿ ದೇವರಾಜು ಗೌರವಾಧ್ಯಕ್ಷರಾಗಿ. ಉಪಾಧ್ಯಕ್ಷರಾಗಿ ಪಾಲಗ್ರಹಾರ ಚಂದ್ರಮೌಳಿ, ಖಜಾಂಚಿಯಾಗಿ ಎಂಕೆ ಉಮೇಶ್ ಆಯ್ಕೆ ಆಗಿದ್ದು ನೂತನ ಪದಾಧಿಕಾರಿಗಳನ್ನ ಅಭಿನಂದಿಸಲಾಯಿತು
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ