May 4, 2024

Bhavana Tv

Its Your Channel

ನಾಗಮಂಗಲದಲ್ಲಿ ಮಾರ್ಚ್ ವೇಳೆಗೆ ಬಗರ್ ಹುಕ್ಕುಂ ಸಾಗುವಳಿ ಚೀಟಿ ನೀಡಲು ಸಮಿತಿ ನಿರ್ಧರಿಸಿದ್ದು ಯಾವುದೇ ಗೊಂದಲ ಬೇಡ – ನರಸಿಂಹಮೂರ್ತಿ ಗೌಡ

ನಾಗಮಂಗಲದಲ್ಲಿ ಮಾರ್ಚ್ ವೇಳೆಗೆ ಬಗರ್ ಹುಕ್ಕುಂ ಸಾಗುವಳಿ ಚೀಟಿ ನೀಡಲು ಸಮಿತಿ ನಿರ್ಧರಿಸಿದ್ದು ಯಾವುದೇ ಗೊಂದಲ ಬೇಡ ಎಂದು ಬಗರ್ ಹುಕ್ಕುಂ ಸಮಿತಿ ಸದಸ್ಯ ದೊಂದೆಮಾದಹಳ್ಳಿ ನರಸಿಂಹಮೂರ್ತಿ ಜೀ ಗೌಡ ರೈತರಲ್ಲಿ ಮನವಿ ಮಾಡಿದ್ದಾರೆ.

ನಾಗಮಂಗಲ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಫಾರಂ 53 ಅರ್ಜಿ ಹಾಕಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡುತ್ತೇವೆ ಎಂದರು.ಅಲ್ಲದೆ ಸಮಿತಿಯಲ್ಲಿ ಹಾಲಿ ಮಾಜಿ ಶಾಸಕರ ಬಣ ರಾಜಕೀಯ ನಡೆಯುತ್ತಿದ್ದು ಸಾಗುವಳಿ ಚೀಟಿ ನೀಡುವರೇ ಎಂಬ ಗೊಂದಲ ಸೃಷ್ಟಿಗೆ. ರೈತರು ತಲೆಕೆಡಿಸಿಕೊಳ್ಳಬಾರದು ಎಂದು ಹೇಳಿದರು ಹಾಗೂ ಸಾಗುವಳಿ ಮಂಜೂರಾತಿಗೆ ಸರ್ವೇಯರ್‌ಗಳು ಆರ್ ಐ ಮತ್ತು ವಿಎಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಸಾರ್ವಜನಿಕವಾಗಿ ಕೇಳಿಬರುತ್ತಿದ್ದು ರೈತರು ಹಣ ಕೊಟ್ಟು ವಂಚಿತರಾಗಬೇಡಿ ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪುರಸಭೆ ನಾಮನಿರ್ದೇಶಿತ ಸದಸ್ಯ ವಿನೋದ್ ಕುಮಾರ್, ಸಂತೋಷ್.ಹಾಗೂ ಎಪಿಎಂಸಿ ನಾಮನಿರ್ದೇಶಿತ ಸದಸ್ಯ ನಂಜುAಡೇಗೌಡ ಆನಂದ್ ಕುಮಾರ್ ಶೆಟ್ಟಿ ಇದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: