ನಾಗಮಂಗಲ: ಜಿ. ಮಾದೇಗೌಡರ ಬಗ್ಗೆ ಅಸಂಬದ್ದವಾಗಿ ಮಾತನಾಡಿರುವ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ದುರಹಂಕಾರದ ಮಾತನ್ನು ಮಾತನಾಡಿರುವುದು ಖಂಡನೀಯ ಕೂಡಲೆ ದಿವಂಗತ ಮಾದೇಗೌಡರ ಸಮಾದಿ ಬಳಿ ಪಶ್ಚಾತಾಪ ಪೂಜೆ ಸಲ್ಲಿಸಿ ಕ್ಷಮಾಪಣೆ ಕೋರುವಂತೆ ಮಾಜಿ ಮನ್ ಮುಲ್ ಅಧ್ಯಕ್ಷ ತೂಬಿನಕೆರೆ ಜವರೇಗೌಡ ಆಗ್ರಹಿಸಿದ್ದಾರೆ.
ನಾಗಮಂಗಲ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಶಿವರಾಮೇಗೌಡ ಮಾದೇಗೌಡರಿಗೆ ಹೊಡೆದಿದ್ದೆ ಎಂಬುದೆ ಸುಳ್ಳು, ಆ ಘಟನೆಯೇ ನಡೆದಿಲ್ಲ, ಮಾದೇಗೌಡರು ಎಂತವರಿಗೂ ಬಿಟ್ಟವರಲ್ಲ, ನಾವೆಲ್ಲಾ ಅವರು ಒಡನಾಡಿಗಳಾಗಿದ್ದು ಈ ಬಗ್ಗೆ ಚರ್ಚೆಗೂ ಸಿದ್ದ ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ ಶಿವರಾಮೇಗೌಡ ತನ್ನ ಮಗನ ರಾಜಕೀಯಕ್ಕಾಗಿ ಈ ರೀತಿ ಸುಳ್ಳು ಹೇಳುವುದ ಬಿಡಬೇಕು ಹಿಂದೆಯೂ ಕೂಡ ಚಿತ್ರನಟ ಹಾಗೂ ಮಾಜಿ ಸಂಸದ ಅಂಬರೀಶ್ ಅವರ ಧರ್ಮಪತ್ನಿ ಸಂಸದೆಯಾದ ಸುಮಲತಾ ರವರ ಬಗ್ಗೆ ಲಘುವಾಗಿ ಮಾತನಾಡಿ ಜಿಲ್ಲಾಧ್ಯಂತ ಆಕ್ರೋಶಕ್ಕೆ ಗುರಿಯಾಗಿದ್ದರು ಮಂಡ್ಯ ಜಿಲ್ಲೆಯ ಜನತೆಯ ಜಿ ಮಾದೇಗೌಡ ರವರನ್ನು ಕಾವೇರಿ ಹೋರಾಟ ವಿಚಾರದಲ್ಲಿ ಅವರು ತೆಗೆದುಕೊಂಡ ನಿರ್ಧಾರ ಹಾಗೂ ಹೋರಾಟಗಳು ಇವತ್ತಿಗೂ ನೆನಪಿನಲ್ಲಿವೆ ಅಂತ ಮಹನೀಯರ ಮಾತನಾಡಬೇಕಾದರೆ ಎಚ್ಚರಿಕೆಯಿಂದಿರಬೇಕು ತಮ್ಮ ರಾಜಕೀಯ ತೆವಲಿಗಾಗಿ ಬಾಯಿಗೆ ಬಂದಹಾಗೆ ಮಾತನಾಡಬಾರದು ಎಂದು ತಿಳಿಸಿದರು
ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ವರದಿ: ಚಂದ್ರಮೌಳಿ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ