April 26, 2024

Bhavana Tv

Its Your Channel

ನೆರೆ ಪರಿಹಾರ ನಿಧಿ ಅಡಿ ನಾಲೆಗೆ ತಡೆಗೋಡೆ ನಿರ್ಮಿಸುವಂತೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಜಿಲ್ಲಾಧಿಕಾರಿಗಳಿಗೆ ಮನವಿ.

ಶಿವಮೊಗ್ಗ: ನೆರೆ ಪರಿಹಾರ ನಿಧಿ ಅಡಿ ನಾಲೆಗೆ ತಡೆಗೋಡೆ ನಿರ್ಮಿಸುವಂತೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.

ಅವರು ಇತ್ತೀಚೆಗೆ ಯಲವಟ್ಟಿ ಗ್ರಾಮದ ರೈತರ ಜಮೀನಿಗೆ ತೆರಳಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದು, ಯಲವಟ್ಟಿ ಗ್ರಾಮದ ಕರ್ಲುಗುಂಡಿ ನಾಲೆ ದಂಡೆಯು ಕಳೆದ ವಾರ ಸುರಿದ ಮಳೆಗೆ ಹಾನಿಗೊಳಗಾಗಿದ್ದು, ಕರ್ಲುಗುಂಡಿ ನಾಲೆಯ ಅಕ್ಕಪಕ್ಕದ ರೈತರು ಜಮೀನಿಗೆ ತೆರಳುವ ರಸ್ತೆ ಹಾಗೂ ನಾಲೆಯು ಸಂಪೂರ್ಣ ದುರಸ್ಥಿ ಹೊಂದಿದ್ದು, ಈ ನಾಲೆಗೆ ಸುಮಾರು 200 ಮೀ ತಡೆಗೋಡೆ ನಿರ್ಮಿಸಿ ಕೊಡಬೇಕೆಂದು ತಿಳಿಸಿದರು.
ಈ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕೂಡಲೆ ಸಂಬAಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆ ಕುರಿತು ಗಮನ ಹರಿಸಲಾಗುವುದು ಎಂದು ತಿಳಿಸಿದರು.

error: