May 19, 2024

Bhavana Tv

Its Your Channel

ರಾಜ್ಯದ ಏಕೈಕ ಕೊರೋನಾ ಮುಕ್ತ ಜಿಲ್ಲೆಗೂ ಹಬ್ಬಿದ ಕೊರೋನಾ; ಹಸಿರು ಕಿರೀಟ ಕೆಳಗಿಟ್ಟ ಚಾಮರಾಜನಗರ

ಚಾಮರಾಜನಗರ : ಕೊರೋನಾ ಮುಕ್ತ ಹಸಿರು ಕಿರೀಟ ಹೊತ್ತಿದ್ದ ಗಡಿ ಜಿಲ್ಲೆ ಚಾಮರಾಜನಗರಕ್ಕೂ ಮಹಾ ಮಾರಿ ಕೊರೋನಾ ಕಾಲಿಟ್ಟಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ 25 ವರ್ಷದ ಯುವಕನಿಗೆ ಕೊರೋನಾ ಇರುವುದು ದೃಢ ಪಟ್ಟಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಇನ್ನೂ ಕೊಟ್ಟಿಲ್ಲ.

ಮುಂಬೈನಿಂದ ಹನೂರು ತಾಲೂಕಿನ ಮಾರ್ಟಳ್ಳಿಗೆ ಹೋಗುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯನ್ನು ಏಳು ದಿನಗಳ ಹಿಂದೆ ಹನೂರಿನಲ್ಲಿ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿತ್ತು. ಮಹಾರಾಷ್ಟ್ರದಿಂದ ಬಂದಿದ್ದಾನೆ ಅನ್ನುವ ಕಾರಣದಿಂದ ಈ ವ್ಯಕ್ತಿಯ ಗಂಟಲು ದ್ರವ, ರಕ್ತ ಮಾದರಿ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿತ್ತು.

ಪಾಸಿಟಿವ್ ಇರುವ ವ್ಯಕ್ತಿ ಈಗಾಗಲೇ ಕ್ವಾರಂಟೈನ್‌ನಲ್ಲಿರುವ ಕಾರಣ ಇತರರಿಗೆ ಸೋಂಕು ಹರಡಿರುವ ಸಾಧ್ಯತೆ ಇಲ್ಲ.

error: