ಬೆಂಗಳೂರು : ಕರ್ನಾಟಕದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ೧೫೦೨ ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ೧೮,೦೧೬ ಕ್ಕೆ ಏರಿಕೆಯಾಗಿದೆ.
ಇಂದೂ ಸಹ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಗರವೇ ಮುಂಚೂಣಿಯಲ್ಲಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಮೈಸೂರು, ಬಳ್ಳಾರಿ, ಧಾರವಾಡ, ವಿಜಯಪುರ, ರಾಮನಗರ, ಕಲಬುರಗಿ, ಬೀದರ್, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ.
ಬೆಂಗಳೂರು-೮೮೯, ದಕ್ಷಿಣಕನ್ನಡದಲ್ಲಿ ೯೦, ಮೈಸೂರು ೬೮, ಬಳ್ಳಾರಿ ೬೫, ಧಾರವಾಡ-೪೭, ವಿಜಯಪುರ-೩೯, ಕಲಬುರ್ಗಿ-೩೮, ಬಿದರ-೩೨, ತುಮಕೂರು-೨೬, ಶಿವಮೊಗ್ಗ-೨೩, ಮಂಡ್ಯ-೧೯, ಉತ್ತರ ಕನ್ನಡ-೧೭, ಹಾಸನ-೧೫, ಉಡುಪಿ-೧೪, ಕೋಲಾರ-೧೨, ರಾಯ್ಚುರು-೧೧, ಬಾಗಲಕೋಟೆ-೧೦. ದಾವಣಗೆರೆ-೮, ಯಾದಗಿರಿ-೭, ಬೆಳಗಾವಿ-೭, ಕೊಡಗು-೬, ಬೆಂಗಳುರು ರೂರಲ್-೫, ಹಾವೇರಿ-೪, ಕೊಪ್ಪಳ-೪, ಚಿತ್ರದುರ್ಗಾ-೩, ಗದಗ-೨, ಚಿಕ್ಕಬಳ್ಳಾಪುರ,ಚಿಕ್ಕಮಂಗಳೂರು ತಲಾ ೧ ಜನರಲ್ಲಿ ಸೋಂಕು ದೃಢವಾಗಿದೆ.
ಇಂದು ರಾಜ್ಯಾದ್ಯಂತ ೨೭೧ ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
More Stories
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಕಾಂಗ್ರೆಸ್ ಮುಖಂಡರಿoದ ಪಟಾಕಿ ಸಿಡಿಸಿ ಸಿಹಿ ವಿತರಣೆ