May 19, 2024

Bhavana Tv

Its Your Channel

ಅಜೆಕಾರು ಶ್ರೀ ರಾಮ ಮಂದಿರದಲ್ಲಿವೀರ ಸೈನಿಕರಿಗೆ ಶ್ರದ್ಧಾಂಜಲಿ ಸಭೆ.

ಅಜೆಕಾರು ; ಹಿಂದೂ ಜಾಗರಣ ವೇದಿಕೆ ಅಜೆಕಾರು ಇದರ ವತಿಯಿಂದ ಭಾರತ ಮತ್ತು ಚೀನಾ ಗಡಿಯ ಗಲ್ವಾನ್ ಕಣಿವೆಯಲ್ಲಿ ಹೋರಾಡಿ ಚೀನೀ ಸೈನಿಕರನ್ನು ಸದೆಬಡೆದು ದೇಶಕ್ಕಾಗಿ ಹುತಾತ್ಮರಾದ ವೀರ ಸೈನಿಕರಿಗೆ ಶ್ರದ್ಧಾಂಜಲಿ ಸಭೆ ಅಜೆಕಾರು ಶ್ರೀ ರಾಮ ಮಂದಿರದಲ್ಲಿ ನಡೆಯಿತು.
ನಿವೃತ್ತ ಶಿಕ್ಷಕ ಶಾಂತಿರಾಜ್ ಜೈನ್ ದೀಪ ಬೆಳಗಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು‌.
ಚೀನಾ ಭಾರತ ಗಡಿಯಲ್ಲಿನ ಸಂಘರ್ಷ ಹಾಗೂ ಗಡಿಯಲ್ಲಿನ ಭಾರತೀಯ ಸೈನಿಕರ ಸವಾಲಿನ ದಿನಗಳ ಕುರಿತು ಮಾಜಿ ಸೈನಿಕ ಶ್ರೀನಿವಾಸ ಸ್ಥೂಲವಾಗಿ ವಿವರಿಸಿದರು.
ಇದೇ ವೇಳೆ ಚೀನಾದ ಯಾವುದೇ ವಸ್ತುಗಳನ್ನು ಖರೀದಿಸುವುದಿಲ್ಲವೆಂದು ಸಭೆಯಲ್ಲಿ ಪ್ರತಿಜ್ಞೆ ಕೈಗೊಳ್ಳಲಾಯಿತು.
ಈ‌ ಸಂದರ್ಭದಲ್ಲಿ ಅಜೆಕಾರು ಠಾಣಾ ಎಸ್ ಐ ಸುದರ್ಶನ್, ನ್ಯಾಯವಾದಿ ಹರೀಶ್ ಅಧಿಕಾರಿ, ಮರ್ಣೆ ಗ್ರಾ.ಪಂ ಕಾರ್ಯದರ್ಶಿ ಹಾಗೂ ನಿವೃತ್ತ ಯೋಧ ಶ್ರೀ‌ನಿವಾಸ್, ತಾ.ಪಂ ಉಪಾಧ್ಯಕ್ಷ ಹರೀಶ್ ನಾಯಕ್, ಎಪಿಎಂಸಿ ಉಪಾಧ್ಯಕ್ಷ ರತ್ನಾಕರ್ ಅಮೀನ್, ಸ್ಥಳೀಯರಾದ ನಂದ ಕುಮಾರ್ ಹೆಗ್ಡೆ, ಗ್ರಾ.ಪಂ ಸದಸ್ಯರಾದ ಪ್ರಶಾಂತ್ ಶೆಟ್ಟಿ, ವಿದ್ಯಾ ಪೈ, ಗುರುಪ್ರಸಾದ್ ರಾವ್ ಮುಂತಾದವರು ಉಪಸ್ಥಿತರಿದ್ದರು.

error: