May 15, 2024

Bhavana Tv

Its Your Channel

ಕೆರೆಗೆ ಬಿದ್ದ ಕಾರು : ಉದ್ಯಮಿ ಸ್ಥಳದಲ್ಲೇ ಸಾವು : ಮಹಿಳೆಗೆ ಗಂಭೀರ ಗಾಯ…

ಬ್ರಹ್ಮವಾರ : ಉಡುಪಿ ಜಿಲ್ಲೆಯ ಬ್ರಹ್ಮವಾರ ಠಾಣೆ ವ್ಯಾಪ್ತಿಯಲ್ಲಿ ಬಾರ್ಕೂರು ಚೌಳಿ ಕೆರೆಗೆ ಕಾರೊಂದು ಬಿದ್ದು ಉದ್ಯಮಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ ಎಂದು ತಿಳಿದು.

ಇಂದು ಮಧ್ಯಾಹ್ನ ಬಾರ್ಕೂರು ಕಡೆಯಿಂದ ಸೈಬ್ರಾಕಟ್ಟೆ ಕಡೆ ತೆರಳುತ್ತಿದ್ದ ಕ್ರೆಟಾ ಕಾರಿನಲ್ಲಿ ಹೋಗುತ್ತಿದ್ದ ವಕ್ವಾಡಿಯ ಪ್ಲೇವುಡ್ ಶಾಪ್‌ನ ಮಾಲಕ ಸಂತೋಷ್ ಶೆಟ್ಟಿ (39) ಕಾರು ಬಾರ್ಕೂರಿನ ಚೌಳಿ ಕೆರೆಗೆ ಬಿದ್ದಿದೆ ಎನ್ನಲಾಗಿದೆ.

ಆದರೆ ಅಪಘಾತಕ್ಕೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.ಕಾರಿನಲ್ಲಿ ಮಹಿಳೆ ಕೂಡ ಇದ್ದೂ ಅವರೂ ಕೂಡ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.ಕಾರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತ ಪಡಿಸಿದ್ದಾರೆ.

ಪೊಲೀಸರು ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ದಾಖಲಿಸಿದ್ದಾರೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.ಬ್ರಹ್ಮಾವರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ

error: