ಕಾರ್ಕಳ: ಕ್ಲೀನ್ ದುರ್ಗ ವಾರಿಯರ್ಸ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ ಹಾಗೂ ಉಚಿತ ಕೋವಿಡ್ ಲಸಿಕೆಯ ಮೇಘಾ ಮೇಳ ದಿನಾಂಕ ೧೮-೦೪- ೨೦೨೧ ರಂದು ದುರ್ಗ ಬೊಂಬೆತಡ್ಕ ದಲ್ಲಿ ನಡೆಯಿತು. ಸುಮಾರು ೨೦೦ಕ್ಕಿಂತಲೂ ಹೆಚ್ಚು ಆರೋಗ್ಯ ಕಾರ್ಡ್ ಹಾಗೂ ೨೫ ಮಂದಿಗೆ ಉಚಿತ ಲಸಿಕೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುರೇಂದ್ರ ಶೆಣೈ ಇವರು ಇಂತಹ ವಿನೂತನ ವಾದ ಮನೆ ಮನೆ ಸಂಪರ್ಕ ಹಾಗೂ ಈ ರೀತಿಯ ಕಾರ್ಯಕ್ರಮಗಳು ಪ್ರತಿ ಊರಿನಲ್ಲಿ ನಡೆಯಬೇಕು ಎಂದು ಆಶಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಕಾಶ್ ಇವರು ಕೋವಿಡ್ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ಪೂರ್ಣಿಮಾ ಗೊರೆ ಕಾರ್ಯಕ್ರಮವನ್ನು ನಿರುಪಿಸಿದರು. ಪ್ರಸನ್ನ ಶೆಣೈ ಪ್ರವೀಣ್ ಶೆಣೈ ಹಾಗೂ ಮಹೇಶ್ ರಾವ್ ವಿಶ್ವನಾಥ ಶ್ರೆಯಾ ಗೊರೆ ,ಮಂಜುನಾಥ್ ಪೈ ಉಪಸ್ಥಿತರಿದ್ದರು.
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ