ಕಾರ್ಕಳ ಕಂದಾಯ ಇಲಾಖೆ ಹಾಗು ಕಾರ್ಕಳ ಪುರಸಭಾ ವತಿಯಿಂದ ಮಾಸ್ಕ್ ಧರಿಸ ದವರಿಗೆ ನೂರು ರೂಪಾಯಿ ದಂಡ ವಿಧಿಸಲಾಯಿತು. ಕೊರೊನಾ ರೋಗ ಹರಡುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಕಾರ್ಕಳ ಬಸ್ ನಿಲ್ದಾಣ ,ಮೂರುಮಾರ್ಗ ಜಂಕ್ಷನ್ ಮಾರ್ಕೆಟ್ ರಸ್ತೆ ಹಾಗೂ ಅಂಗಡಿ ಜುವೆಲ್ಲರಿ ಶಾಪ್ ಸೆಲೂನ್, ಬಟ್ಟೆ ಅಂಗಡಿ ಫ್ಯಾನ್ಸಿ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಯಿತು.
ಕೆಲವು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೆ ಅಧಿಕಾರಿಗಳಿಗೆ ಉಡಾಫೆಯ ಮಾತುಗಳನ್ನು ಆಡಿದರು. ಮುಂದಿನ ದಿನಗಳಲ್ಲಿ ಇದೇರೀತಿ ಮಾಸ್ಕ್ ಧರಿಸದೆ ಇದ್ದಲ್ಲಿ ಅಂಗಡಿಯ ಪರವಾನಿಗೆಯನ್ನು ರದ್ದು ಗೊಳಿಸಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಕಳ ತಹಶೀಲ್ದಾರ್ ಪ್ರಕಾಶ್ ಮರ ಬಳ್ಳಿ ಹಾಗೂ ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ,ಪುರಸಭಾ ಸಂತೋಷ್ ಲೈಲಾ ಥೋಮಸ್ ಇನ್ನಿತರ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಈ ಕುರಿತು ಮಾದ್ಯಮಕ್ಕೆ ತಹಸೀಲ್ದಾರ್ ಪ್ರಕಾಶ್ ಮರ ಬಳ್ಳಿ ಮಾಹಿತಿ ನೀಡಿದರು.
ವರದಿ: ಅರುಣ ಭಟ್ಟ ಕಾರ್ಕಳ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.