ಕಾರ್ಕಳ: ಹೆಬ್ರಿಯ ತಾಲ್ಲೂಕಿನ ಚಾರ ಗ್ರಾಮದ ನವೋದಯ ವಿದ್ಯಾಲಯದ ಬಳಿ ಗುರುವಾರ ರಾತ್ರಿ ಬೈಕೊಂದು ಸ್ಕಿಡ್ ಆಗಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ .
ಮೃತ ಯುವಕ ಅಲ್ಬಾಡಿ ನಿವಾಸಿಯಾದ ಚಿತ್ತರಂಜನ್ ಶೆಟ್ಟಿ ೨೧ ವಯಸ್ಸಿನ ಈತ ಅಲ್ಬಾಡಿಯಿಂದ ಹೆಬ್ರಿ ಕಡೆಗೆ ತನ್ನ ಬೈಕಿನಲ್ಲಿ ಬರುತ್ತಿದ್ದಾಗ ಚಾರ ನವೋದಯದ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ .ಅದೇ ಸಮಯದಲ್ಲಿ ಹೆಬ್ರಿಯಿಂದ ಅಲ್ಬಾಡಿ ಕಡೆ ಹೋಗುತ್ತಿದ್ದ ಪಿಕಪ್ ವಾಹನ ಈತನ ಮೇಲೆ ಚಲಿಸಿದ ಪರಿಣಾಮ ಯುವಕ ಪಿಕಪ್ ನ ಅಡಿ ಸಿಲುಕಿಕೊಂಡಿದ್ದು .ತಲೆಗೆ ಗಂಭೀರವಾದ ಗಾಯವಾಗಿ ಚಿತ್ತರಂಜನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ .ಈತ ಅಲ್ಬಾಡಿಯ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದನು ಎನ್ನಲಾಗಿದೆ .
ಹೆಬ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ .
ವರದಿ: ಅರುಣ ಭಟ್ಟ ಕಾರ್ಕಳ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.