ಕಾರ್ಕಳ: ಕಾರ್ಕಳ ಶ್ರೀ ಶಂಕರ ಪ್ರತಿಷ್ಠಾನ(ರಿ.)ಪ್ರಸಾದ ಭವನ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ಕಾರ್ಕಳ ತೆಳ್ಳಾರು ರಸ್ತೆಯಲ್ಲಿರುವ “ಕಸ್ತೂರಿ ಸಭಾಂಗಣದಲ್ಲಿ ” ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷ ಮಾನ್ಯ ಕೇಶವ ರಾವ್ ರವರ
ಅಧ್ಯಕ್ಷತೆಯಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ೨೦೨೦-೨೧ ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ತೇರ್ಗಡೆಯಾದ ಕೀರ್ತನ ಹೆಬ್ಬಾರ್, ರಕ್ಷಿತಾ, ಶಾರ್ವರಿ, ಅರವಿಂದ ರಾವ್, ಪ್ರಜ್ಞಾ, ಕೆ.ಸುದೀಪ್ ಹೆಬ್ಬಾರ್,ಕು.ಅದಿತಿ, ಆದರ್ಶ್ ರಾವ್,ಹಾಗೂ ಕು.ಶ್ರೇಯ ಹೆಬ್ಬಾರ್, ಮತ್ತು ೧೦ ನೇ ತರಗತಿಯಲ್ಲಿ ಉತ್ತೀರ್ಣರಾದ ಆಕಾಶ್, ಕು.ಅದಿತಿ, ಸುಜೇಶ್, ಕು.ರಚನಾ ಎಮ್ ಹಾಗೂ ಕು.ಸಿಂಚನ ಶರ್ಮಾ ಇವರೆಲ್ಲರಿಗೂ ಪ್ರತಿಷ್ಠಾನದ ವತಿಯಿಂದ ಹಾಗೂ ದಾನಿಗಳಾದ ಅನುರಾದ ಶರ್ಮ, ಇವರ ವತಿಯಿಂದ ವಿದ್ಯಾರ್ಥಿವೇತನ ಹಾಗೂ ಪ್ರತಿಷ್ಠಾನದ ವತಿಯಿಂದ ಮತ್ತು ದಾನಿಗಳಾದ ಸಾವಿತ್ರಿ ಮನೋಹರ ರಾವ್ ಇವರಿಂದ ಪೆನ್ನುನೋಟ್ ಪುಸ್ತಕವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷರು ಹಾಗು ಹಿರಿಯರಾದ ಕೃತಿವಾಸ ಶರ್ಮ,ರತ್ನಾಕರ ರಾವ್,ಮುರಲೀಧರ ಶರ್ಮ. ಹರಿಶ್ಚಂದ್ರ ರಾವ್ ಕೆ., ರಮೇಶ್ ರಾವ್ ಸಿ., ಸತೀಶ್ ಭಟ್, ಸಿ. ಎ. ರಮೇಶ್ ರಾವ್ ಕೆ, ವಿಜಯಕುಮಾರ್ ಪರಪ್ಪು, ಭವಾನಿ ಶಂಕರ ರಾವ್, ಶೈಲಜ ರಾವ್, ಪ್ರಭಾವತಿ ಐ.ಕೆ,ಇವರಿಂದ ದೀಪ ಪ್ರಜ್ವಲನೆ ಮಾಡುವ ಮುಖೇನ ನೆರವೇರಿತು.
ಇದೇ ಸಂದರ್ಭದಲ್ಲಿ ದಾನಿಗಳಾದ ಕುಕ್ಕುಂದೂರಿನ ರಾಜೇಶ್ವರಿ ಶರ್ಮ ಇವರನ್ನು ಸನ್ಮಾನಿಸಲಾಯಿತು. ಹಿಂದಿನ ವರ್ಷದ ವರದಿಯನ್ನು ಕಾರ್ಯದರ್ಶಿ ಹರಿಶ್ಚಂದ್ರ ರಾವ್ ವಾಚಿಸಿದರು ಹಾಗು ಖಜಾಂಚಿ ಕೋದಂಡರಾಮ್ ರವರು ಲೆಕ್ಕಪತ್ರ ಮಂಡಿಸಿದರು. ಶ್ರಿಮತಿ ಮಲ್ಲಿಕಾ ಹೆಬ್ಬಾರ್ ಸ್ವಾಗತಿಸಿ , ಶ್ರೀಮತಿ ಸೌಮ್ಯ ರಾವ್ ಧನ್ಯವಾದ ನೀಡಿ, ಶ್ರೀಲತಾ ಶರ್ಮಾರವರು ಕಾರ್ಯಕ್ರಮ ನಿರ್ವಹಿಸಿದರು
ವರದಿ: ಅರುಣ ಭಟ್ಟ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,