ವರದಿ ಅರುಣ್ ಭಟ್ ಕಾರ್ಕಳ
ಕಾರ್ಕಳ. ಗ್ರಾಮ ಪಂಚಾಯತ್ ಹಾಗೂ ನಾರವಿಯ ಅಂಚೆ ಕಚೇರಿಯ ಸಹಭಾಗಿತ್ವದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಯ ಆಂದೋಲನ ಕಾರ್ಯಕ್ರಮ ಗ್ರಾಮಪಂಚಾಯತ್ ನಲ್ಲಿ ಯಶಸ್ವಿಯಾಗಿ ನಡೆಯಿತು. ನೂರಾಲ್ ಬೆಟ್ಟು ಜನರಿಗೆಮಾತ್ರ ಅವಕಾಶವಿದ್ದು ಸುಮಾರು ೩೦೦ ಕ್ಕಿಂತ ಹೆಚ್ಚು ಜನರು ಭಾಗವಹಿಸಿದರು.ಒಂದು ದಿನಕ್ಕೆ ಕೇವಲ ನೂರೈವತ್ತು ಮಂದಿ ಜನರಿಗೆ ಆಧಾರ್ ಕಾರ್ಡ್ ತಿದ್ದುಪಡಿಗೆ ಅವಕಾಶ ವಿದ್ದು ಉಳಿದವರಿಗೆ ಮರುದಿನ ಆಧಾರ್ ಕಾರ್ಡ್ ತಿದ್ದು ಪಡಿಗೆ ಅವಕಾಶ ಎಂದು ಉಪಾಧ್ಯಕ್ಷರು ಎನ್ ವಿಜಯಕುಮಾರ ಜೈನ್ ತಿಳಿಸಿದರು.ಆಧಾರ್ ಕಾರ್ಡ್ ತಿದ್ದುಪಡಿಯ ಕಾರ್ಯಕ್ರಮದಲ್ಲಿ ಪೋಸ್ಟ್ ಮಾಸ್ಟರ್ ವಿಗ್ನೇಶ್,ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಪಿಡಿಒ ಆನಂದ್ ವಾರ್ತಿ, ಸದಸ್ಯರಾದ ಜಯ, ಸುವರ್ಣ ಸುರೇಶ್ ಆಚಾರ್ಯ ಸದಾನಂದ ಪೂಜಾರಿ ಪ್ರಶಾಂತ್,ಪುರುಷೋತ್ತಮ್ ಗೌಡ, ರಮೇಶ, ಸವಿತಾಜೈನ, ಸುಜಾತ, ವಿನಯ, ರಮಣಿ, ಮಾಲತಿ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,